ಮಳೆ ಬಂದಿದೆ ಮನ ತುಂಬಿದೆ

[ಎಂದೋ ಬರೆದಿದ್ದ ಈ ಮಳೆಹನಿಕವನವನ್ನು(ನನ್ನ ಪ್ರಕಾರ ಅಷ್ಟೇನೂ ಗಂಧವಿಲ್ಲದ...) ಇಂದು ನಿಮ್ಮ ಮುಂದಿಡುತ್ತಿದ್ದೇನೆ...]




ಬಿಸಿಲ ಝಳದಲಿ ನಿಂತು

ಬಿರಿದ ನೆಲದಲಿ ಕುಂತು

ಆಕಾಶವನ್ನೇ ದಿಟ್ಟಿಸುತ್ತಿದ್ದ

ಗುಳಿಹೋದ ಕಣ್ಣುಗಳೀಗ

ಛಾವಣಿಯ ನೆರಳಲಿ

ಬಲು ಸಂತಸದಿ

ಕಣ್ಮುಚ್ಚಿ ವಿಶ್ರಮಿಸುತ್ತಿವೆ..


ಕಾಡಿನಲ್ಲಿ ಕಾಲಿಡಲು

ಬಿರಿಬಿಸಿಲ ಬೇಗೆಯಲಿ

ಉದುರಿಹೋದ ಒಣ ಎಲೆಗಳು

ತೂರಿ ಹಾರಾಡುತ್ತಿದ್ದವು ಅಂದು

ಕಾಡಿನಲ್ಲಿ ನಡೆದಾಡಲು

ಬೀಸುವ ಸುಯ್ಯನೆ ಗಾಳಿಲಿ

ಚಿಗುರೆಲೆಗಳಲ್ಲಿ ಅಡಗಿರುವ ಹನಿಗಳು

ತಂಪನೆರಚುತ್ತಿವೆ ಇಂದು..


ಹಳ್ಳ-ತೊರೆಗಳು ತುಂಬಿ ಹರಿದು

ಮನದಲೂ ಕನಸ ಕೋಡಿ ಹೊಡೆದಿದೆ

ಹರುಷದ ಮಳೆ ಬಂದು..


ಬಿಸಿಲ ಬೇಡವೆಂದಿದ್ದ ಜೀವಗಳೆಲ್ಲ

ಮಳೆಯ ಚುಮುಚುಮುಚಳಿಗೆ

ಎಳೆಬಿಸಿಲು ಕಾಯಲು

ಹಾತೊರೆದು ಮೈಮುರಿದು ಕಾದಿವೆ..


ಒಣಭೂಮಿಗೆ ಬಾಯಾಕಿ

ಎಣಗುತ್ತಿದ್ದ ದನ-ಕರುಗಳು

ಚಿಗುರಿದ ಗರಿಕೆಲಿ ಕುಳಿತ

ಮಳೆಹನಿ ಸೋಕಲು

ಮುಸಿಮುಸಿ ನಕ್ಕು ಕುಣಿಯುತ್ತಿವೆ..


ಬಿರಿಬಿಸಿಲ ಲೆಕ್ಕಿಸದೆ ಓಡಾಡುತ್ತಿದ್ದ ಮಕ್ಕಳು

ಜಾರಿ ಬೀಳುವೆವೆಂಬ ಭಯದಿ

ಎಚ್ಚರಿಕೆಯ ಆಟವಾಡುತ್ತಿವೆ..


ಅಂತೂ ಇಂತೂ ಮಳೆ ಬಂದಿದೆ

ಮನ ತುಂಬಿ ಹರಿದಿದೆ..



~-~

32 ಕಾಮೆಂಟ್‌ಗಳು:

sunaath ಹೇಳಿದರು...

ಇಂತಹ ಚಂದದ ಕವನವನ್ನು ಪ್ರಕಟಿಸದೆ ಇಷ್ಟು ದಿನ ಬಿಟ್ಟಿದ್ದೇಕೆ?

ಕನಸು ಹೇಳಿದರು...

ಹಾಯ್,
ನಿಮ್ಮ ಕವಿತೆ ಆಮಗುವಿನ ಮುದ್ದಾದ ನಗುವಿನಷ್ಟೇ
ಚೆಂದಾಗಿದೆ.

Snow White ಹೇಳಿದರು...

nijakku tumba tumba chennagide kavana.. :):)

ಭಾಶೇ ಹೇಳಿದರು...

ಕವನ ಚೆನ್ನಾಗಿದೆ. ಆದರೆ ಮಳೆಯಿಲ್ಲದ ಈ ಕಾಲದಲಿ ಪ್ರಕಟಿಸಿ ಹೊಟ್ಟೆ ಉರಿಸಿದ್ದೀರ :(

ಸೀತಾರಾಮ. ಕೆ. / SITARAM.K ಹೇಳಿದರು...

ಅಧ್ಬುತವಾದ ಕವನ. ತಮ್ಮ ಮಳೆಯ ಅಭಿವ್ಯಕ್ತಿ ಸಂಕೇತಗಳು ಮನವನ್ನು ಮುದಗೊಳಸಿದವು. ಚೆಂದದ ಕವನ.

shridhar ಹೇಳಿದರು...

ಸುಂದರ ಕವನ ..

ಅಂತೂ ಬಂತು ಮಳೆ .. ತಂಪಾದಳು ಇಳೆ.

ಸುಧೇಶ್ ಶೆಟ್ಟಿ ಹೇಳಿದರು...

ಉದ್ದಕ್ಕೆ ಹಾಗೆ ಓದಿಸಿಕೊ೦ಡು ಹೋಯಿತು ಕವನ... ತು೦ಬಾ ಚೆನ್ನಾಗಿ ಬರೆದಿದ್ದೀರ...ಇಷ್ಟ ಆಯಿತು

ಸಾಗರದಾಚೆಯ ಇಂಚರ ಹೇಳಿದರು...

ಸುಂದರ ಕವನ
ಮಗುವಿನ ನಗೆಯನ್ನು ಮೀರಿಸುವಂತಿದೆ

Unknown ಹೇಳಿದರು...

e kavanada mukantara gottagutte eaga neevu tumba khushiyagiddira anta.yavaglu hege naguttiri.kavana antu tumba chennagide excellent.matte nimma jeevanadalli a baragalada baduku barade irli anta kelkotini.

ಜಲನಯನ ಹೇಳಿದರು...

ಬೇಸಿಗೆಯ ಮೊದಲ ಮಳೆಯ ವಿವಿಧ ರೂಪಾವತಾರದ ದರ್ಶನ..ಚನ್ನಾಗಿದೆ ನಿಮ್ಮ ಕವನದ ಮೂಲಕ ಹರಿದುಬಂದ ರೀತಿ...ಗುರು.

ಚುಕ್ಕಿಚಿತ್ತಾರ ಹೇಳಿದರು...

kavana sundaravaagi barediddeeri...

ದೀಪಸ್ಮಿತಾ ಹೇಳಿದರು...

ಚೆನ್ನಾಗಿದೆಯಲ್ರೀ. ಗಂಧವಿಲ್ಲ ಅಂತ ಯಾಕೆ ಬೇಸರ?

Raghu ಹೇಳಿದರು...

ಮಳೆ ಬಂದರೆ ಹಾಗೆ ಮನಸ್ಸಿಗೂ ಏನೋ ಒಂದು ಖುಷಿ ಕೊಟ್ಟು ಹೋಗುತ್ತೆ ಅಲ್ವ..?
ನಿಮ್ಮವ,
ರಾಘು.

ಅನಂತ್ ರಾಜ್ ಹೇಳಿದರು...

ಇಳೆಗೆ ಭರದಿ೦ದ ಬೀಳುತ್ತಿರುವ ಮಳೆ ಹೊರಗೆ..
ಬೆಳಗಿನಿ೦ದ ಮುಗಿಯದ ಕಛೇರಿಯ ಕೆಲಸ ಒಳಗೆ..
ಮನಸಿನ ಮನೆಯ ಬ್ಲಾಗ್ ತೆರೆದೆ ಕ೦ಪ್ಯೂಟರಿನೊಳಗೆ..
ಹರುಷದ ಹನಿಗಳು ಮುದದಿ೦ದ ಹರಿದವು ನನ್ನೆಡೆಗೆ..

ಶುಭಾಶಯಗಳು
ಅನ೦ತ್

ಮನಮುಕ್ತಾ ಹೇಳಿದರು...

ಸೊಗಸಾದ ಕವನ...ಮುದ್ದಾದ ಮಗುವಿನ ಚಿತ್ರ..ಹಿಡಿಸಿತು.

Ashok.V.Shetty, Kodlady ಹೇಳಿದರು...

nimma kavana sundaravaagide..maleya varnane sigasaagide...dhanyavaadagalu...

ಮನಸಿನಮನೆಯವನು ಹೇಳಿದರು...

sunaath,
ಎಲ್ಲದಕ್ಕೂ ಸಮಯ ಕೂಡಿಬರಬೇಕಲ್ವ.. ಅದಕ್ಕೆ ತಡವಾಯ್ತು.

ಮನಸಿನಮನೆಯವನು ಹೇಳಿದರು...

ಕನಸು,
ಹೌದಾ..

ತುಂಬಾ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

Snow White,

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಭಾಶೇ,
ನಿಮಗೆ ಮಳೆ ಇರದೇ ಇಲ್ದೆ ಇರಬಹುದು.. ಇಲ್ಲಿ ಸುರಿತಾನೆ ಇದೆ.. ಅದಕ್ಕೆ ಪ್ರಕಟಿಸಿದೆ..
ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಸೀತಾರಾಮ. ಕೆ. / SITARAM.K ,
ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

shridhar,

ಹೌದಲ್ವ..
ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಸುಧೇಶ್ ಶೆಟ್ಟಿ ,

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಸಾಗರದಾಚೆಯ ಇಂಚರ ,

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ದಿವ್ಯಶ್ರೀ.. ,

ನಿಮ್ಮ ಮಾತಿಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ..
ಯಾಕಂದ್ರೆ ನನ್ನ ಈ ಕವನದಲ್ಲಿ ಯಾವ ರೀತಿ ನೋಡಿದರೂ ನನ್ನ ಮನಸಿನ ಪರಿಸ್ಥಿತಿ ಅರ್ಥ ಆಗೋಲ್ಲ..ಅಂತಹದರಲ್ಲಿ ನೀವು ಹೇಗೆ ನಾನು ಸಂತೋಷವಾಗಿದೀನಿ ಅಂತೀರಾ?
ಹೋಗ್ಲಿ.. ಹೇಗೋ ಅಂದುಕೊಂಡಿರಿ.. ಆದ್ರೆ ಅದು ತಪ್ಪು.. ನಾನು ಮೊದಲಿಗಿಂತ ಹೆಚ್ಚು ನೋವಲ್ಲಿದೀನಿ..
ನಿಮಗೆ ಗೊತ್ತು ನನ್ನ ಸಂತೋಷ ಎಲ್ಲಿದೆ.. ಅಂತ??

ಒಂದಂತು ತಿಳಿದಿರಲಿ..
sick of crying
tired of trying
yeah i am smiling
but inside i am dying..
ಈ ಸಾಲುಗಳು ನಂಗೆ ತುಂಬಾ ಹೊಂದಾಣಿಕೆ ಆಗ್ತವೆ.

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಜಲನಯನ,

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಚುಕ್ಕಿಚಿತ್ತಾರ,

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

Deepasmitha,

ಅಷ್ಟೇನೂ ಸೊಗಸಾದ ಪದಪುಂಜ ಉಪಯೋಗಿಸಿಲ್ಲ ಅಂತ ಹಾಗನ್ಸಿತ್ತು..
ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

Raghu,

ಹೌದು.. ಖಂಡಿತ.
ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಅನಂತರಾಜ್,

ನನ್ನ 'ಮನಸಿನಮನೆ'ಗೆ ಸ್ವಾಗತ..

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಮನಮುಕ್ತಾ,

ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ashokkodlady,

ಧನ್ಯವಾದಗಳು..

Related Posts Plugin for WordPress, Blogger...