ಕನ್ನಡ ಮತ್ತು ನನ್ನ ಬದುಕು..



!!ಜ್ಞಾನಾರ್ಪಣಮಸ್ತು!!


ನಾನು ಕನ್ನಡಮಾಧ್ಯಮದಲ್ಲೇ ನನ್ನ ಪ್ರಾಥಮಿಕ & ಪ್ರೌಢ ಶಿಕ್ಷಣ ಮುಗಿಸಿದ್ದೇನೆ ಎಂಬ ವಿಷಯದಲ್ಲಿ ನನಗೆ ಹೆಮ್ಮೆ ಇದೆ.
ಹೈಸ್ಕೂಲು ಮುಗಿಸಿ ಪಿಯುಸಿನಲ್ಲಿ  ಸೈನ್ಸ್ ಆಯ್ದುಕೊಂಡಾಗ, ಅಲ್ಲಿ ಎಲ್ಲವೂ ಇಂಗ್ಲಿಷ್ನಲ್ಲೇ ಇರೋದ್ರಿಂದ, ಸಾಮಾನ್ಯವಾಗಿ ನನ್ನಂತೆ ಕನ್ನಡ ಮಾಧ್ಯಮದಿಂದ ಬಂದವರಿಗೆ ಆಗುವ ಇಂಗ್ಲಿಷಿನ ಸಮಸ್ಯೆಯ ಭಯ ನನಗೂ ಆಗಿದೆ. ಮೊದಮೊದಲು ನಾನು ಬರೆದುಕೊಂಡ ನೋಟ್ಸ್ಗಳನ್ನು ಇಂದು ತೆಗೆದು ನೋಡಿದರೆ ನಾನೇನ ಬರೆದಿದ್ದು!! ಎನಿಸುವಂತಹ ಭಯಂಕರ ಇಂಗ್ಲೀಶ್ ಸ್ಪೆಲಿಂಗ್ ಮಿಸ್ಟೇಕ್ಗಳಿಂದ ಮೂಡಿರುವ, ಯಾವ ಡಿಕ್ಷನರಿಯಲ್ಲೂ ಇರದ ಪದಗಳು. ನಾನು ಕನ್ನಡ ಚೆನ್ನಾಗಿ ಓದುತ್ತಿದ್ದಾಗ ಬರೆಯುತ್ತಿದ್ದಾಗ ಕನ್ನಡದಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದಾಗ ಸಹಪಾಠಿಗಳು ತಮಾಷೆಗಾಗಿಕನ್ನಡಪಂಡಿತ’ ಎಂದು ರೇಗಿಸುತ್ತಿದ್ದರೂ, ಪದಕ್ಕೂ ನನಗೂ ಸಂಬಂಧವೇ ಇಲ್ಲ.
ನಮ್ಮ ವಿಷಯಗಳು ಇಂಗ್ಲಿಷ್ನಲ್ಲೇ ಇದ್ರೂ ಕೂಡ ಕನ್ನಡದಲ್ಲಿ ಸುಲಲಿತವಾಗಿ ಅರ್ಥ ಹೇಳಿ ಕಲಿಸುತ್ತಿದ್ದ ಮೇಸ್ಟ್ರುಗಳು ನಮಗೆ ಅಚ್ಚುಮೆಚ್ಚು,ಅವರಿಂದಲೇ ನಾವು, ಅಂದರೆ ನನ್ನಂತವರು, ಪಿಯುಸಿ ಸೈನ್ಸ್ ಅನ್ನು ಬಿಡದೆ ಮುಂದುವರೆಸಿದ್ದೀವಿ,ಪಾಸಾಗಿದ್ದೀವಿ ಕೂಡ., ಹಾಗಾಗಿ ಅವ್ರಿಗೆ ಯಾವಾಗ್ಲೂ ನನ್ನ ಪ್ರಣಾಮಗಳನ್ನು ಅರ್ಪಿಸೋಕೆ ಇಷ್ಟಪಡ್ತೀನಿ. ಕೆಲವರಂತೂ ಒಂದು ಪದವೂ ಕನ್ನಡ ಬಳಸ್ತ ಇರ್ಲಿಲ್ಲ, ಹಾಗಾಗಿ ಅವರ ಮೇಲೆ ಕೋಪ ಇತ್ತು, ಅವರ ಪಾಠಗಳೂ ಅರ್ಥ ಆಗಿಲ್ಲ, ಅದರಲ್ಲಿ ಅವರ ತಪ್ಪಿಲ್ಲದೆ ಇರಬಹುದು. ಆದರೂ..  ಕನ್ನಡ ಮಾಧ್ಯಮದಿಂದ ಬಂದು, ಸೈನ್ಸ್ ಸೇರಿದ ಹಳ್ಳಿಯ ವಿದ್ಯಾರ್ಥಿಗಳು ಇಂಗ್ಲಿಷಿನ ಭಯಕ್ಕೆ ಹೆದರಿ, ಸೈನ್ಸ್ ಬಿಟ್ಟು ಬೇರಾವುದಕ್ಕೋ ನೆಗೆದುಬಿಡಲು ಇಂತಹ ಮೇಸ್ಟ್ರುಗಳು ಕೂಡ ಒಂದು ಕಾರಣ ಅಂತ ನನ್ನ ನಂಬಿಕೆ.

 ಹೇಗೋ ಪಿಯುಸಿ ಮುಗೀತು, ಡಿಗ್ರೀ., ಬಿ.ಎಸ್ಸಿ.

ಡಿಗ್ರೀ ಸೇರೋ ಹೊತ್ತಿಗೆ, ಅಂದರೆ ಪಿಯುಸಿಯಲ್ಲಿ ಇರಬೇಕಾದರೇನೆ, ನಾನು ಕನ್ನಡ ಬ್ಲಾಗಿಗರಲ್ಲಿ ಒಬ್ಬನಾಗಿ ಸೇರಿದ್ದೆ, ಹಾಗಾಗಿ ನನಗೆ ಕನ್ನಡ ಅಂದರೆ ಬಹಳ ಪ್ರೀತಿ. ನಾನು ಕನ್ನಡದಲ್ಲೇ ಎಂ. .  ಮಾಡಿ ಒಳ್ಳೊಳ್ಳೆ ಸಾಹಿತ್ಯ ಕಲಿತು ಓದಿ ಬರೆಯಬೇಕು ಅನ್ನೋ ಅಭಿರುಚಿಯನ್ನು ನನ್ನ ಮನಸ್ಸಿನಲ್ಲಿ ಮೂಡಿಸಿದ್ದು ಕನ್ನಡ ಬ್ಲಾಗಿನ ಸಾಹಿತ್ಯದ ಒಲವು. ಆಗಂತೂಎದೆ ತಟ್ಟಿ ಹೇಳು ನಾನೊಬ್ಬ ಕನ್ನಡಿಗ’,’ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’,’ಅನ್ನ ತಿನ್ನುವ ಮುನ್ನ ನೆನೆಯೊ ಕನ್ನಡವನ್ನ’.. ಎಂಬ ಇಂತಹ ಘೋಷಣೆಗಳು, 'ಕನ್ನಡವೇ ಸತ್ಯ-ನಿತ್ಯ' ಎಂಬ ಪ್ರೀತಿಯ ವಾಕ್ಯಗಳು ತುಂಬಾನೇ ಇಷ್ಟ ಆಗ್ತಿದ್ದವು.
ಆರ್ಕುಟ್, ಫೇಸ್ ಬುಕ್(ಆಗಿನ್ನೂ ಅಷ್ಟಾಗಿ ಪ್ರಚಲಿತವಾಗಿರಲಿಲ್ಲ ಎನಿಸುತ್ತದೆ )ನಂತಹ ಸಾಮಾಜಿಕ ತಾಣಗಳಲ್ಲಿ ಕನ್ನಡದವರು ಕನ್ನಡದಲ್ಲೇ ತಲೆಬರಹ (ಪ್ರೊಫೈಲ್ ನೇಮ್/ ಕ್ಯಾಪ್ಶನ್) ಹಾಕಬೇಕು, ಕನ್ನಡದಲ್ಲೇ ಟೈಪ್ ಮಾಡ್ಬೇಕು ಎನ್ನುವ ಹುಚ್ಚು ಆಸೆ ನನ್ನಂತ ಅಂಧ ಅಭಿಮಾನಿಗಳದ್ದು. ಕನ್ನಡ ಅಕ್ಷರಗಳನ್ನು ಓದಲಾಗದ, ಬರೆಯಲಾಗದ ಕೆಲ ಕಂಪನಿಯ ಫೋನ್ ಗಳನ್ನು ಕಂಡರಂತೂ ನನಗೆ ತುಂಬಾ ಕೋಪ ಬರ್ತಿತ್ತು, ಈಗಲೂ ಬರುತ್ತೆ ಕೂಡ.
ಆಗಂತೂ ಇಂಗ್ಲೀಶ್ ಇಂಪಾರ್ಟೆಂಟ್ ಅಂತ ಯಾರಾದ್ರೂ ಹೇಳಿದ್ರೆ ಬೇಸರಾಗ್ತಿತ್ತು, ಕನ್ನಡವನ್ನು ಮಾತ್ರ ಕಲಿತವರಿಗೆ ಅವಕಾಶಗಳಿಲ್ಲವೇ.,  ಯಾಕೆ ಕಲಿಬೇಕು ಅನ್ನಿಸ್ತಿತ್ತು. ಆದರೆ ನಾನು ಆಯ್ದುಕೊಂಡಿದ್ದುದು ವಿಜ್ಞಾನ.
ಇಂತಹ ಒಂದು (ಕನ್ನಡ ಸಾಹಿತ್ಯದ ಗೀಳು), ಕನ್ನಡದ ಮೇಲಿನ ಹುಚ್ಚು ಅಂಧಪ್ರೀತಿ ನನ್ನಲ್ಲಿ ತುಂಬಿಕೊಂಡಿದ್ದಾಗ ನನ್ನಲ್ಲಿ ಹೇಗೆ ತಾನೇ ಇಂಗ್ಲೀಶ್ ಕಲಿಬೇಕು ಅನ್ನೋ ಭಾವನೆ ಹುಟ್ಟೋದಿಕ್ಕೆ. ಸಾಧ್ಯ?. ಹುಟ್ಟಲೇ ಇಲ್ಲ

ಡಿಗ್ರೀ ಮುಗಿಸಿ ಏನೋ ಮಾಡ್ಬೇಕು ಅಂತಿದ್ದವನು ಏನೋ ಮಾಡುವಂತಾಗಿ ಮಾಸ್ಟರ್ ಡಿಗ್ರೀ ಮೆಟ್ಟಿಲು ಕೂಡ ಹತ್ತಿಬಿಟ್ಟೆ. ಕಾರಣಾಂತರಗಳಿಂದ ಬ್ಲಾಗ್ ಬರೆಯೋದನ್ನ ನಿಲ್ಲಿಸಿದ್ದು, ಚೆನ್ನಾಗಿ ಓದಿ ರಾಂಕ್ ಪಡೆದದ್ದು.. ಎಲ್ಲವೂ ಒಂದೆಡೆ ಇರಲಿ, ಅಲ್ಲೂ ಇಂಗ್ಲೀಶ್ ಕಲಿಲೆ ಇಲ್ಲವಲ್ಲ. ಸೈನ್ಸ್ನಲ್ಲಿ ಮಾಸ್ಟರ್ಸ್ ಮಾಡಿದವರಿಗೆ ತಾನಾಗೇ ಇಂಗ್ಲೀಶ್ ಬಂದಿರುತ್ತೆ ಅಂತ ಅಂದುಕೊಂಡಿದ್ದ ಲೆಕ್ಕಾಚಾರವೇ ತಪ್ಪಾಗಿ ಹೋಯ್ತು.
ಆಗ ನನ್ನ ಗುರುಗಳು ಯಾವಾಗ್ಲೂ ಹೇಳ್ತಿದ್ರು: “ ಸೈನ್ಸ್ ಫೀಲ್ಡ್ ನಲ್ಲೇ ಮುಂದುವರಿಬೇಕಂದ್ರೆ ನೀನು ಇಂಗ್ಲೀಶ್ ಕಲಿಲೇಬೇಕು, ಕೇವಲ ವಿಷ್ಯ ತಿಳ್ಕೊಂಡ್ರೆ ಸಾಕಾಗಲ್ಲ. ತಿಳಿದಿರುವ ವಿಜ್ಞಾನವನ್ನ ಹೇಳೋದಿಕ್ಕೆ ಇಂಗ್ಲೀಷ್ ಮುಖ್ಯ. ಇರಬೇಕು ಕನ್ನಡಾಭಿಮಾನ ಎಷ್ಟಿರಬೇಕೋ ಅಷ್ಟು. ಅತಿಯಾಗಬಾರದು..   ಅದ್ಯಾಕಾಗಿ ದೇವರು ಭಾಷೆಗಳಲ್ಲಿ ವೈವಿಧ್ಯತೆ ಸೃಷ್ಟಿ ಮಾಡ್ಬಿಟ್ನೋ, ಎಲ್ಲರಿಗೂ ಒಂದೇ ಭಾಷೆ ಇದ್ದಿದ್ರೆ ತುಂಬಾ ಚೆನ್ನಾಗಿರ್ತಿತ್ತು..”
ಮಾತುಗಳು ನನಗೂ ಹೌದೆನಿಸಿ ಇಂಗ್ಲಿಶ್ ಕಲಿಯಲು ಆದಷ್ಟು ಪ್ರಯತ್ನ ಮಾಡ್ತಿದ್ದೆ. ಕೆಲವು ಇಂಗ್ಲೀಶ್ ಬುಕ್ಸ್ ಓದೋವಾಗಂತೂ ಒಂದೊಂದೇ ಪದಕ್ಕೆ ಅರ್ಥ ಹುಡುಕ್ತಾ ಹುಡುಕ್ತಾ ಸಾಕಾಗಿ ಓದೋದೇ ಬೇಡ ಅನ್ನಿಸ್ತಿತ್ತು. ಎಷ್ಟೋ ಒಳ್ಳೆಯ ಇಂಗ್ಲೀಶ್ ಪುಸ್ತಕಗಳನ್ನು ಓದೋದನ್ನು ಮಿಸ್ ಮಾಡ್ಕೊಳ್ತಾ ಇದ್ದೀನಿ ಅನ್ನಿಸ್ತಿತ್ತು.
ಅಂತೂ ಸ್ನಾತಕೋತ್ತರ ಪದವಿ ಕೂಡ ಮುಗೀತು. ಇಂಗ್ಲೀಶ್ ಬರಲೇ ಇಲ್ಲ.

ನನ್ನ ಎಂ.ಎಸ್ಸಿ. ಮುಗಿದ ಮೇಲೆ ನನ್ನ ಗುರುಗಳು ನನ್ನನ್ನು ಭಾರತೀಯ ವಿಜ್ಞಾನ ಮಂದಿರಕ್ಕೆ ತಂದು ಹಾಕಿಯೇ ಬಿಟ್ಟರು.
ಇಂಟರ್ವ್ಯೂ ಅಟೆಂಡ್ ಮಾಡಿದ್ದ ಮೊದಲ ದಿನ. ಸುಮಾರು ಒಂದು ಘಂಟೆಗಳ ಕಾಲ ಬರೆ ಇಂಗ್ಲಿಷ್ನಲ್ಲೇ ನಡೆದ ಸಂಭಾಷಣೆ. ಶುಡ್.ವಿಲ್,ಡಿಡ್ಇಂತಹ ಸುಮಾರು ಪದಗಳನ್ನು ಹೇಗೆ, ಯಾವಾಗ ಬಳಕೆ ಮಾಡಬೇಕು ಅಂತಾನೆ ಗೊತ್ತಿರದಿದ್ದ ನಾನು ನನ್ನದೇ  ಇಂಗ್ಲೀಶ್ ಪದಗಳಿಂದ ತೊದಲಿ ತೊದಲಿ ನುಡಿದಿದ್ದೆ. ‘ಲ್ಯಾಬ್ನಲ್ಲಿ ಎಲ್ಲರೂ ಇಂಗ್ಲಿಷ್ನಲ್ಲಿ ಮಾತಾಡ್ತಾರೆ, ಕನ್ನಡದವರು ಸಿಗೋದೆ ಅಪರೂಪ, ಅವರ ಜೊತೆ ವ್ಯವಹರಿಸೋದು ಹೇಗೆ, ಇಲ್ಲಿ ಸೈನ್ಸ್ ಲಿಟರೇಚರ್ ಇಂಗ್ಲೀಷ್ನಲ್ಲೇ ಇರುತ್ತೆ ಓದಿ ಅರ್ಥ ಮಾಡಿಕೊಂಡು ಬರೆಯೋದು ಹೇಗೆಎಂದು ಅವರು ಕೇಳುತ್ತಿದ್ದ ಮಾತಿಗೆ ನಾನು ಏನೆಂದು ಹೇಳಲು ಸಾಧ್ಯ. ಘಳಿಗೆಯಲ್ಲೇ ನನ್ನ ಬಂಡವಾಳ ನನಗೆ ಗೊತ್ತಾಗಿದ್ದು. ನನ್ನಲ್ಲಿದ್ದ ಕನ್ನಡದ ಅಂಧವ್ಯಾಮೋಹವೆಲ್ಲ ಸಂಪೂರ್ಣ ನಾಶವಾಗಿ, ಇಂಗ್ಲೀಶ್ ಕಲಿಲೇಬೇಕು  ಎನ್ನೋ ಭಾವನೆ ನನ್ನೊಳಗೆ ನುಗ್ಗಿದ್ದು ಅಂದ್ರೆ ಅದೇ ಘಳಿಗೆಯಲ್ಲಿ.

ಕನ್ನಡ ಕನ್ನಡ ಅಂತಿದ್ದ ನಾನು ನನ್ನ ಭಾಷವ್ಯಾಮೋಹವನ್ನು ಅಳೆದು ನೋಡುವ ಕಾಲ ಬಂತು. IISc ಸೇರಿ ಬಿಟ್ಟೆ. ಇಲ್ಲಿರುವ ನೂರಾರಕ್ಕಿಂತ ಹೆಚ್ಚು ಜನರಲ್ಲಿ ಕನ್ನಡದವರು ಬೆರಳಿಕೆಯಷ್ಟು ಮಾತ್ರ. ಯಾರಿಗಾದ್ರೂ ಏನಾದ್ರೂ ಹೇಳಬೇಕೆಂದ್ರೆ, ಅವ್ರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬೇಕಾದರೆ ನನ್ನ ಪಾಡು ಶೋಚನೀಯ. ಒಂದು ಫೋನ್ ರಿಸೀವ್ ಮಾಡೋಕೂ ನನಗೆ ಭಯ, ಏನಂತಾರೋ ಏನನ್ನಬೇಕೋ ಅಂತ. ನನಗೆ ಇಂಗ್ಲೀಶ್ ಬರುತ್ತಿಲ್ಲವಲ್ಲ ಅನ್ನೋದರ ಕುರಿತು ನನ್ನ ಮೇಲೆ ನನಗೆ ಕೀಳಿರಿಮೆ ಹುಟ್ಟಿದ್ದು ಇಲ್ಲೆ. ನನ್ನ ಕನ್ನಡಪ್ರೇಮ,ಇಂಗ್ಲಿಷಿನ ಮೇಲಿದ್ದ ದ್ವೇಷ, ಅದೂ ಇದು ಎಂಬ ಒಣವೇದಾಂತ ಎಲ್ಲವನ್ನೂ ಮೂಟೆಕಟ್ಟಿ ಬಿಸಾಡಿ ಮುಚ್ಚಿಕೊಂಡು ಇಂಗ್ಲಿಷನ್ನು ಕಲಿಯಲೇಬೇಕಾದ ಪರಿಸ್ಥಿತಿ.
 ಇಂಗ್ಲೀಶ್ ಕಲಿಯದೆ ಇಲ್ಲಿ ಇರಲು ಸಾಧ್ಯವಿಲ್ಲ ಎಂದು ತಿಳಿದಾಗ, ಮತ್ತೆ ನಾನು ಬೇಡವೆಂದು ಬಿಸಾಡಿದ್ದ ಹಳೇ ಪುಸ್ತಕಗಳನ್ನು ತೆಗೆದುಕೊಂಡು ಮತ್ತೆ ಪ್ರಯೋಗಗಳನ್ನು ಶುರು ಮಾಡಿದೆ. ಮೊದಮೊದಲು ಅದೆಷ್ಟು ಪ್ರಯತ್ನ ಮಾಡಿದ್ರೂ ಕೂಡ ಅಡಿಪಾಯವೇ ಇಲ್ಲದ ಕಡೆ ಮನೆ ಕಟ್ಟಲು ಹೋಗುವಂತಿದೆ ಎನಿಸುತ್ತಿತ್ತು ನಾನು ಕನ್ನಡಮಾಧ್ಯಮದ ವಿದ್ಯಾರ್ಥಿ ಎನಿಸಿದಾಗ. ನನಗೆ ಇಷ್ಟವಾಗುತ್ತಿದ್ದ ಹಳೇ ಹೇಳಿಕೆಗಳು ನೆನಪಾದರೆ ಅವುಗಳ ಹಿಂದೆ ಸುತ್ತುತ್ತಿದ್ದ ನಾನು ಶತಮೂರ್ಖನೇನೋ ಎನಿಸುವಂತಹ ಭಾವ. ಇಂಗ್ಲೀಶ್ ನಮಗೆ ಬರದಿದ್ದರೇನು, ಅದಕ್ಕೂ ಜೀವನಕ್ಕೂ ಏನು ಸಂಬಂಧ, ನಮ್ಮ ಭಾಷೆ ಸಾಕಲ್ಲವೇ, ಎಂಬ ಹೇಳಿಕೆಗಳು ಹೇಳೋದಿಕ್ಕಷ್ಟೆ,ಕೇಳೋದಿಕ್ಕಷ್ಟೆ. ಅವುಗಳನ್ನು ಹೋಲಿಕೆ ಮಾಡುವ ಪ್ರಸಂಗ ನಿಜಜೀವನದಲ್ಲಿ ಬಂದಾಗಇಂಗ್ಲೀಶ್ಎಂಬ ಮಹಾ___ವನ್ನು ನನ್ನಿಂದ ಹೆದರಿಸಲು ಆಗಲಿಲ್ಲ.
ಇಲ್ಲಿಗೆ ಬಂದು 3-4 ತಿಂಗಳಲ್ಲೇ ಇಂಗ್ಲೀಶ್ ತಾನಾಗೇ ಬರುತ್ತೆ ಎಂದು ಕೆಲವರು ಹೇಳಬಹುದು, ಏನು ಬರೋದು ಮಣ್ಣು, ಅದಕ್ಕೆ ನನ್ನ ಪ್ರಯತ್ನ ಬೇಡವೇ, ಪ್ರಯತ್ನಕ್ಕೆ ಸಮಯ ಬೇಡವೇ,ಬಿಡುವು ಬೇಡವೇ, ಮುಖ್ಯವಾಗಿ ಮನಸ್ಸಿರಬೇಡವೇ..?
ಇದು ನನ್ನೊಬ್ಬನ ಮಾತಲ್ಲ, ಇಂಗ್ಲೀಶ್ ಬಾರದೆ ಮಾತೃಭಾಷೆಯನ್ನೇ ನೆಚ್ಚಿ ಓದಿಕೊಂಡು ಇಂತಹ ಕಡೆ ಬಂದ ಎಷ್ಟೋ ಜನರದ್ದು, ಕೆಲವರಿಗಂತೂ ಮೊದಮೊದಲು ಇಂಗ್ಲೀಶ್ ಬೆರ್ಚಪ್ಪನಂತೆ ಕಾಡಿಬಿಡುತ್ತೆ.. ಇದನ್ನು ಹೇಗೆ ಹೆದರಿಸಬೇಕು, ನನಗೇಕೆ ಇಂಗ್ಲಿಶ್ ಬರುತ್ತಿಲ್ಲ ಎಂಬ ಪ್ರಶ್ನೆ ಹುಟ್ಟಿದಾಗಲೆಲ್ಲ - 'ಬರುತ್ತಿಲ್ಲ ಎಂದರೆ ಹೇಗೆ, ಅದನ್ನು ಕಲಿಯುವುದಕ್ಕಾಗಿ ನಾನು ದಿನಾಗಲೂ ಎಷ್ಟು ಸಮಯ ಮೀಸಲಿಡುತ್ತಿದ್ದೇನೆ?' ಎಂದು ಕೇಳಿಕೊಳ್ಳುತ್ತೇನೆ.  ಇಂತಹ ಜನಗಳ ನಡುವೆ ತಮ್ಮದೇ ಭಾಷೆಯವರನ್ನು ಹುಡುಕಿ ಮಾತಾಡಿಸಿದಾಗ,ಅವರೂ ನಮ್ಮದೇ ಭಾಷೆಯಲ್ಲಿ ಮಾತಾಡಿದಾಗ ಏನೋ ಆನಂದ. ಆದರೆ ಇಂತಹ ಪರಿಸ್ಥಿತಿಗಳ ಹೆದರಿಸಿ, ಮಾತೃಭಾಷೆಯಿಂದ ಏನು ಉಪಯೋಗ ಆಗದೆ ಮೇಲೆ, ಅದಕ್ಕಾಗಿಯೇ ಅದರ ಮೇಲೆ ಹಗೆ ಸಾಧಿಸುವಂತಹವರು ಇದ್ದಾರೆ ಇಲ್ಲಿ.
ಭಾಷೆ ಮೇಲೆ ಅಂದಾಭಿಮಾನ ಇರಬಾರ್ದು, ಇಂತಹ ಕ್ಷೇತ್ರದಲ್ಲಿರಬೇಕಂದ್ರೆ ಎನ್ನುವುದಕ್ಕಿಂತ ಹೆಚ್ಚಾಗಿ ಈಗಿನ ಯುಗದಲ್ಲಿ ಇಂಗ್ಲೀಶ್ ಇರದೆ ಕಷ್ಟ ಎನಿಸುತ್ತೆ. ಇಂಗ್ಲೀಶ್ ಬರಲ್ಲ ಎಂಬ ಕಾರಣಕ್ಕೆ ಉದ್ಯೋಗಮೇಳಗಳಿಂದ ಹೊರಗೆ ಬಿದ್ದ ಕೆಲವರನ್ನೂ ನೋಡಿದ್ದೇನೆ.ಇಂಗ್ಲೀಶ್ ಬರದಿದ್ದುಕ್ಕೆ ಕೆಲವು ಕಡೆ ಹೋಗಿ ಮಂಗನಂತೆ ನಿಲ್ಲಬೇಕೆಂದು ಕೆಲವು ಆಸೆಗಳನ್ನು ತ್ಯಾಗ ಮಾಡುವವರೂ/ಮಾಡಿದವರೂ ಇದ್ದಾರೆ, ಇಂಗ್ಲೀಶ್ ಮುಖ್ಯ ಎಂದು ಅನುಭವದಿಂದ ತಿಳಿದು ಮಕ್ಕಳ ಇಂಗ್ಲೀಶ್ ಕಲಿಕೆಯ ಕಡೆ ಹೆಚ್ಚು ಗಮನ ಇಡುವ ಪೋಷಕರು, ಕಲಿಯಲೇಬೇಕಾದಾಗ ಸರ್ಕಸ್ ಮಾಡುವ ಸ್ವಕಲಿಕಾರ್ಥಿಗಳು, ಕನ್ನಡವ ಉಳಿಸುತ್ತೇನೆಂಬ ಮೊಂಡರು, ಕನ್ನಡ ಉಳಿಸುವ ಚಿಂತನೆ ನಡೆಸುವ ಸಾಹಿತಿಗಳು,ಹಿರಿಯರು.ಗೌರವಾನ್ವಿತರು, ಗೊಂದಲಕ್ಕೀಡಾದ ಜನ-ಮನ, ದಾರಿ ಕಾಣದ ಕನ್ನಡ.
ಇವೆಲ್ಲವನ್ನೂ ನೋಡಿದ್ರೆ ನನ್ನ ಗುರುಗಳ ಸಾನ್ನಿಧ್ಯದಲ್ಲಿ ಕೇಳಿದ ಮಾತು ಮತ್ತೆ ನೆನಪಾಗುತ್ತೆಯಾಕಾದ್ರೂ ಭಾಷೆಯಲ್ಲಿ ವೈವಿಧ್ಯತೆ ಇದೆಯೋ, ಎಲ್ಲರದೂ ಒಂದೇ ಭಾಷೆಯಾಗಿದ್ದರೆಷ್ಟು ಚೆಂದವಿರುತಿತ್ತುಎಂದು.

ಅಚ್ಚುಬೆಲ್ಲದ ಗಲ್ಲದವಳೇ..

!!ಜ್ಞಾನಾರ್ಪಣಮಸ್ತು!!

[ಮನದ ಮಲ್ಲಿಗೆಯ ನೆನೆದು ]


ಮಿನುಗುತಾರೆಗಳೆಲ್ಲವ ಕಣ್ಣಿಟ್ಟು ನೋಡಿದೆನು
ನಿನ್ನ ಕಣ್ ಬೆಳಕಿಗೆ ಸಮನಾದ ಹೊಂಬೆಳಕಿಲ್ಲ.. 
ನಿನ್ನ ಕಂಗಳಂತೆ ಹೊಳೆವ ಮಿನುಗುದೀಪ ಬೇರೊಂದಿಲ್ಲ..

ನೂರಾರು ಹೂಗಳ ಮನವಿಟ್ಟು ನೋಡಿದೆನು 
ನಿನ್ನ ತುಟಿಯಂತೆ ಹೂ ದಳಗಳೇ ಇಲ್ಲ..
ನಿನ್ನಾ ಹೂನಗೆಗೆ ಸಮನಾದ ಹೂ ಮತ್ತೊಂದಿಲ್ಲ.. 

ಅದೆಷ್ಟೋ ಸ್ವರಕೆ ಕಿವಿಗೊಟ್ಟೆ ನಾನು
ನಿನ್ನ ಕಾಲ್ಗೆಜ್ಜೆ ಹಾಡಿಗೆ ಸಾಟಿ ಇಲ್ಲ.. 
ನಿನ್ನಾ ನಗು ಮಾತಿಗಿಂತ ಸಂಗೀತ ಇನ್ನೊಂದಿಲ್ಲ.. 

ನಿನ್ನಾ ನಡುವ ಬಳುಕು
ಯಾವ ಬಳ್ಳಿಗೂ ಇಲ್ಲ.. 
ನಿನ್ನಲ್ಲಿನ ಆ ಸೆಳೆತ
ಯಾವ ಸೊಬಗಿಗೂ ಇಲ್ಲ.. 

ಅಚ್ಚುಬೆಲ್ಲಕ್ಕಿಂತ ರುಚಿಯೇನೋ ನಿನ್ನ ಗಲ್ಲ
ನಾನು ಕಚ್ಚಿ ನೋಡಿಲ್ಲ.. 
ಜೇನಿಗಿಂತ ಸವಿಯೇನೋ ನಿನ್ನಾ ತುಟಿಗಳು
ನಾ ಚಪ್ಪರಿಸಿಯೇ ಇಲ್ಲ..

ಮನಸಿನಮನೆಗೆ ದೀಪವಿಟ್ಟ ನನ್ನವಳೆ
ನಿನ್ನ ಪರಿಶುದ್ಧ ಹೃದಯಕಿದೋ ನನ್ನ ಅಕ್ಷರಪುಷ್ಪಾರ್ಚನೆ...


ಸ್ವೀಕರಿಸು ನನ್ನನ್ನ..

!!ಜ್ಞಾನಾರ್ಪಣಮಸ್ತು!!


ಕಾರಣಗಳು ಕಾರಣಗಳಲ್ಲ ಎಂದರೂ ಕೂಡ ಕೆಲ ಕಾರಣಗಳಿಂದ ನಾನು ಬ್ಲಾಗ್ನಲ್ಲಿ ಬರೆಯುವುದನ್ನು ನಿಲ್ಲಿಸಿ(ಕವಿತೆ ಬರೆಯುವುದನ್ನು ನಿಲ್ಲಿಸಿರಲಿಲ್ಲ) ಹತ್ತತ್ತಿರ ಎರಡು ವರುಷಗಳಾಗುತ್ತಾ ಬಂದಿತ್ತು. ಯಾವ ಕಾರ್ಯಸಾಧನೆ!!?ಗಾಗಿ ನಾನು ಬ್ಲಾಗ್ ಕಡೆ ಬರುವುದನ್ನು ನಿಲ್ಲಿಸಿದ್ದೆನೋ ಆ ಕಾರ್ಯ ಮುಗಿಯುವ ಹಂತದಲ್ಲಿತ್ತು ಹಾಗೂ ಅದರಲ್ಲಿ ಗೆಲುವು ನಿಶ್ಚಿತ ಎಂದೂ ಒಳಮನಸ್ಸು ಹೇಳುತ್ತಿತ್ತು.

ರಾತ್ರಿಪೂರ ತುಂಬಾ ಹೊತ್ತು ಎಚ್ಚರವಿದ್ದು ಏನಾದರೊಂದು ಮಾಡುವುದು ನನಗಿಷ್ಟವಾದ ಒಂದು ಹವ್ಯಾಸ.
ಅಂದು ಮಧ್ಯರಾತ್ರಿ ಸರಿಸುಮಾರು 2 ಗಂಟೆ ಇರಬಹುದು, ಮನಸ್ಸು ಕೆಲ ಒತ್ತಡಗಳಿಂದ ಬಿಡುಗಡೆ ಹೊಂದಿ ನಿರಾಳ ಆಗಿದ್ದರಿಂದಲೋ ಏನೋ ಅಂದು ರಾತ್ರಿ ನನ್ನ ಬ್ಲಾಗ್ ನೆನಪಾಗುತ್ತಾ ಬಂತು, ನಾನು ಮತ್ತೆ ನನ್ನ ಬ್ಲಾಗ್ ಮುಖ ನೋಡಬೇಕು ಎನಿಸಿತು. ನನ್ನ ‘ಮನಸಿನಮನೆ’ಯನ್ನು ತೆರೆದು ಪುಟಗಳನ್ನು ತಿರುವುಹಾಕೋಕೆ ಶುರುಮಾಡಿದೆ. ಈ ಎರಡು ವರುಷಗಳಲ್ಲಿ ನನ್ನ ಮೇಲೆ ನಾನೇ ನಡೆಸಿದ ಹಲವು ಜೀವನಪ್ರಯೋಗಗಳಿಂದ ನನ್ನ ಮನಸ್ಥಿತಿಯ ಚಿತ್ರಣ ಹಿಂದಿಗಿಂತ ತುಂಬಾನೇ ಬದಲಾಗಿತ್ತು. ನಾನೇ ಬರೆದಿದ್ದ ನನ್ನ ಮನಸಿನಮನೆಯ ಕವಿತೆಗಳನ್ನು ಓದಿದಾಗ ಇವನ್ನೂ ಬರೆದಿದ್ದು ನಾನೇ ಎಂದು ನಂಬಲಾಗದೇ ಓದುತ್ತಾ ಸಾಗಿದೆ. (ನನಗನಿಸಿದಂತೆ) ಇಂದು ಜೀವನದಲ್ಲಿ ಆಶಾವಾದಿ ಬದುಕಿನ ಕುರಿತು ಏನಾದರೂ ಹೇಳುತ್ತಿರುವ ನಾನು., ನಾನೇ, ಹಿಂದೆ ಬರೆದಿದ್ದೆಲ್ಲಾ ನಿರಾಶವಾದವೇ ತುಂಬಿ ಹರಿದಿದ್ದ ಕವಿತೆಗಳು. ಜೀವನ ನಶ್ವರ ಎಂದು ಬರೆದಿದ್ದ ನನ್ನ ಆ ಹಿಂದಿನ ಸ್ಥಿತಿ ನೆನಪಾಗಿ ನನಗೆ ನನ್ನ ಮೇಲೆಯೇ ಏನೋ ಅನಿಸುತ್ತಿತ್ತು. ನನ್ನ ಆ ನಿರಾಶಾವಾದದ ಸಾಲುಗಳಿಗೆ ಪ್ರತಿಕ್ರಿಯಿಸಿ - ಈ ಖಿನ್ನತೆ ಬೇಡ, ಇದರ ದಾರಿ ಬಿಟ್ಟು ಬಾ ಎಂದು ಆಶಾವಾದದ ದಿಕ್ಕು ತೋರಿಸುತ್ತಿದ್ದ ನನ್ನ ಬ್ಲಾಗ್ ಹಿತೈಷಿಗಳ ಅಭಿಪ್ರಾಯಗಳು ನಿಜಕ್ಕೂ ನನ್ನನ್ನು ಮೌನಿಯಾಗಿಸಿದವು. ಮತ್ತೆ ಅವರೆಲ್ಲರ ಸ್ನೇಹ-ಸನಿಹ ಬೇಕೆನಿಸಿತು.
ಬ್ಲಾಗ್ ಕುರಿತಾದ ಎಲ್ಲ ಸಂಬಂಧ ದೂರವಾಗಿಸಿಕೊಳ್ಳಲು ನಾನು ತೆಗೆದುಹಾಕಿದ್ದ ನನ್ನೆಲ್ಲ ಅಕೌಂಟ್ ಗಳನ್ನು ಮತ್ತೆ  ತೆರೆದೆ. ನನ್ನ ಆ ಹಳೆಯ ಫೇಸ್ ಬುಕ್ನಲ್ಲೂ ಅದೇ ನಿರಾಶಾವಾದದ ಕಥೆಯೇ. ನನ್ನ ಆ ಪ್ರೊಫೈಲ್ ನೋಡಿ ನನ್ನ ಆ ನಿರಾಶವಾದಕ್ಕೆ ಕಾರಣ ಕೇಳುತ್ತಾ ನನ್ನ ಯೋಚನಾಶೈಲಿ ತಪ್ಪಾಗಿದೆ ಎಂದು ತುಂಬಾ ಜನರು ಉತ್ಸಾಹ ತುಂಬಲು ಯತ್ನಿಸಿ ಕಳುಹಿಸಿದ್ದ ಸಂದೇಶಗಳತ್ತ ಕಣ್ಣು ಹಾಯಿಸುತ್ತಿದ್ದೆ.

ಹೌದು. ಅಕ್ಕ. ಸ್ವಲ್ಪವೂ ಪರಿಚಯ ಇಲ್ಲದಿದ್ದರೂ ನನ್ನ ಬರಹದ ಹಿಂದಿನ ಮನೋಭಾವ ಅರಿತು, ನನ್ನ ಆ ವಯಸ್ಸಿಗೆ ಆ ಯೋಚನೆಗಳು ಸಲ್ಲದೆಂದು ತಿಳಿದು, ಜೀವನದ ಕುರಿತು ನನಗಿದ್ದ ದೃಷ್ಟಿಕೋನ ಬದಲಾಯಿಸಲು ಬಯಸಿ, ಸೋದರಿವಾತ್ಸಲ್ಯ ಕಾಣದ ನನಗೆ ತಮ್ಮಯ್ಯ ಎಂದು ಕರೆದು, ಪ್ರೀತಿಯ ಮಾತನಾಡಿ ನನ್ನ ನೋಟ ಬದಲಿಸಿಕೊಳ್ಳಲು ಬುದ್ಧಿಹೇಳಿದ್ದ ರೂಪಕ್ಕ. ಅವರು ನನ್ನೊಡನೆ ಸಂಭಾಷಿಸಿದ್ದ ಆ ಸಂಭಾಷಣೆಯನ್ನು ಅಂದು ಮತ್ತೆ ಮತ್ತೆ ಓದಬೇಕೆನಿಸಿತು, ಓದಿದಷ್ಟೂ ಮನದಾಳದ ಕಡಲ ನೀರಿಂದ ಜಾರಿ ಹೊರಬಿದ್ದ ಭಾವನೆಯ ಮೀನೊಂದು ಒದ್ದಾಡಿದಂತ ಅನುಭವ. ಅದ್ಯಾಕೋ ಕಾಣೆ ಕಣ್ಣುಗಳು ತುಂಬಿಕೊಳ್ಳತೊಡಗಿದವು. ಇವರೆಲ್ಲ ಯಾರು.., ಯಾಕಾಗಿ ನನ್ನ ಕುರಿತು ಕಾಳಜಿ ವಹಿಸಿ ಅನುಕಂಪ ತೋರಿಸುತ್ತಿದ್ದರು.., ಎನಿಸತೊಡಗಿ ನನಗೂ ಇವರಿಗೂ ಇದ್ದ ಬಂಧವಾದರೂ ಎಂತಹದು ಎಂದು ಮನಸ್ಸು ಚಿಂತಿಸತೊಡಗಿತು.  ಇಂತಹ ಹಿತೈಷಿಗಳೆಲ್ಲರನ್ನೂ ಮರೆತು ನಾನು ತಪ್ಪು ಮಾಡಿದ್ದೇನ ಎನಿಸಿತು,ಭಾವುಕನಾದೆ. ಮತ್ತೆ ಮತ್ತೆ ಈ ಜನಮಾನಸದ ಒಡನಾಟ ಬೇಕು ಎಂದು ತವಕ ಉಂಟಾಗಿ, ನಾನು ಮತ್ತೆ ಬ್ಲಾಗಿಗನಾಗಬೇಕು, ಮತ್ಯಾವ ಕಾರಣಕ್ಕೋ ದೂರಾಗಬಾರದೆಂದು ನಿಶ್ಚಯಿಸಿದೆ.

ಇಂದು ಬಂದಿದ್ದೇನೆ.

ಬ್ಲಾಗ್ ಲೋಕವೇ ನಿನ್ನನ್ನು ದೂರವಿರಿಸಿ ತಪ್ಪು ಮಾಡಿದೆನೇನೋ ಎಂಬ ಪಾಪಪ್ರಜ್ಞೆ ನಿರಂತರವಾಗಿ ಕಾಡುತ್ತಿತ್ತು.
ನಾನು ಭವಿಷ್ಯದಲ್ಲಿ ಏನಾಗಬೇಕು ಎಂದಿದ್ದೆನೋ ಅದು ಆಗೇ ಆಗುತ್ತೇನೆ, ಇಂದು ಮತ್ತೆ ಲೇಖನಿಯಿಡಿದು ಬ್ಲಾಗಿಗನಾಗಿ, ಹಿಂದಿರುಗದೆ ಮುಂದುವರೆಯಬಯಸುವ ನಿಟ್ಟಿನಲ್ಲಿದ್ದೇನೆ,ದಯವಿಟ್ಟು ಅವಕಾಶ ಮಾಡಿಕೊಡು. ನನ್ನೆಲ್ಲ ಭಾವನೆಗಳನ್ನು ಬಿತ್ತಲು ಎದೆಕೊಟ್ಟ ಓ ನನ್ನ ಪ್ರೀತಿಯ ಮನಸಿನಮನೆಯೇ ನಾನು ಮತ್ತೆ ನಿನ್ನ ಮಡಿಲಿಗೆ ಬಂದಿದ್ದೇನೆ ಸ್ವೀಕರಿಸು ನನ್ನನ್ನ. ನಿನ್ನಲ್ಲಿ ಮತ್ತೆ ಅಕ್ಷರಪುಷ್ಪವನ್ನು ಅರಳಿಸುವ ಪಣ ತೊಡುತ್ತಿದ್ದೇನೆ,ಸ್ವೀಕರಿಸು ನನ್ನನ್ನ. ಸ್ವೀಕರಿಸು.
(ಸೂಚನೆ: ಈ ಹತ್ತು ಸಾಲುಗಳು ‘ಮಠ’ ಚಿತ್ರದ ಒಂದು ದೃಶ್ಯದಿಂದ ಪ್ರೇರೇಪಿತವಾಗಿವೆ)

ಬಾಡಿದ ಕುಸುಮಗಳ
ಘಮಿಸುವಂತೆ ಅರಳಿಸಿ..
ಮನದಮನೆಗೆ ದೀಪತೋರಿ
ಕತ್ತಲೆಯ ದೂರವಿರಿಸಿ..
ಹೊಸದೊಂದು ಲೇಖನಿಯಿಂದ
ಅಕ್ಷರದ ಚಿತ್ರಬಿಡಿಸಿ.
ಮತ್ತೆ ಸ್ವಾಗತಿಸುತಿರುವೆ
ನಲ್ಮೆಯ ನಗುಹೂವಿರಿಸಿ..

ಮನಸಿನಾಮನೆಗೆ
ಬಲಗಾಲಿಟ್ಟು ಒಳಗೆ ಬಾ..
ಅರಳು ಬಾ ಕವಿತೆಯ ಚೆಲುವೆ..
ಬೆರೆವ ಬಾ ಕವನದ ಒಲವೆ..
ಮತ್ತೆ ಮರೆಯಲಾಗಲಾರದಂತೆ
ಅಗಲಿ ನೋವ ನೀಡದಂತೆ
ಬಿಗಿದಪ್ಪಿ ಆಲಂಗಿಸು.
ಸ್ವೀಕರಿಸು..
ಸ್ವೀಕರಿಸು ನನ್ನನ್ನ ಸ್ವೀಕರಿಸು.

Related Posts Plugin for WordPress, Blogger...