ತಿರುಗಿ ನೋಡಿದಾಗ...

[ ಹಲವು ನೆನಪುಗಳ ಬುತ್ತಿ..]


ಕಾಲವು ನಮ್ಮೆಲ್ಲರನ್ನೂ ೨೦೧೦ ರಿಂದ ತಂದು ೨೦೧೧ ರ ಹೊಸ್ತಿಲಲ್ಲಿ ತಂದು ನಿಲ್ಲಿಸಿದೆ..
ಈ ಸಮಯದಲ್ಲಿ ೨೦೧೦ರ ಕೆಲವು ನೆನಪುಗಳನ್ನು ಮೆಲುಕು ಹಾಕೋಣ ಎನಿಸುತ್ತಿದೆ..
೨೦೧೦ ರ ಆರಂಭ ಕನ್ನಡಿಗರ ಪಾಲಿಗೆ ಶುಭಾರಂಭ ಆಗಲಿಲ್ಲ..
ನಿಮಗೆ ತಿಳಿದಿರುವಂತೆಯೇ ಕಾರಣ ೨೦೦೯ರ ಕರಾಳ ಅಂತ್ಯ..

೨೦೦೯ರ ಅಂತ್ಯದಲ್ಲಿ ಕನ್ನಡ ಭಾವಗೀತಾ,ಜಾನಪದಗೀತ ಹಾಗೂ ಸುಗಮ ಸಂಗೀತ ಲೋಕದ ಕಂಚಿನ ಕಂಠದ ಖ್ಯಾತ ಗಾಯಕರಾದ ಸಿ.ಅಶ್ವತ್ಥ ನಾರಾಯಣ ಅವರು ಅವರ ೭೦ ನೆ ಜನ್ಮದಿನವಾದ ಡಿಸೆಂಬರ್ ೨೯ ರಂದೇ ನಮ್ಮನ್ನು ಅಗಲಿದ್ದರು.. ಇವರ ಅಗಲಿಕೆಯಿಂದ ಸುಗಮ ಸಂಗೀತ ಲೋಕದಲ್ಲಿ ಕಣ್ಣೀರು ಕೇಳುವ ಸಂಗೀತ ಮೊರೆಯತೊಡಗಿತು..

ನೋವಿನಿಂತ ಚೇತರಿಸಿಕೊಳ್ಳುವಷ್ಟರಲ್ಲೇ ಡಿಸೆಂಬರ್ ೩೦ ರಂದು ಕನ್ನಡ ಕಲಾದೇವಿಯ ಕಿರೀಟದಿಂದ ಇನ್ನೊಂದು ಮುತ್ತು ಉದುರಿಹೋಯಿತು.. ಆ ಮುತ್ತು ಕನ್ನಡ ಸಿನಿಮಾರಂಗದ ಫೀನಿಕ್ಸ್,ಕರ್ನಾಟಕ ಸುಪುತ್ರ, ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್.
ಅವರು ಸಾವನ್ನಪ್ಪಿ ಕನ್ನಡಾಭಿಮಾನಿಗಳಿಗೆ ಭಾರಿ ಆಘಾತ ಉಂಟಾಯ್ತು..
'ಅಪ್ಪಾಜಿ ಇಲ್ಲ ಹೊಸವರ್ಷದ ಸಂಭ್ರಮ ನಮಗೇಕೆ' ಎಂದು ಅಭಿಮಾನಿಗಳು ಕಣ್ಣೀರು ಹರಿಸಿದ್ದರು..

ಹೀಗೆ ೨೦೧೦ ಕೆಟ್ಟದಾಗಿ ಆರಂಭವಾಯ್ತು..
ಆರಂಭದಲ್ಲೇ ಸುಮಾರು ೩೭೦ ಚಲಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಮತ್ತೊಬ್ಬ ಕಲಾವಿದ ಕೆ.ಎಸ್. ಅಶ್ವಥ್ ಅವರು ಕಾಲವಾಗಿ ಹೋದರು..

ವಿಷ್ಣು ಅವರಿಲ್ಲದೆ ಅವರ ಜನ್ಮದಿನವಾದ ಸೆಪ್ಟೆಂಬರ್ ೧೮ ಅಭಿಮಾನಿಗಳೆಲ್ಲ ಅನಾಥರಾಗಿ ಕಂಗಾಲಾಗಿ ಕುಳಿತಿದ್ದರು..
ಈಗಲೂ ಅವರ ಭಾವುಕ ನಟನೆಯ ದೃಶ್ಯಗಳು ನನ್ನ ಕಣ್ಣುಗಳನ್ನು(ನನ್ನ ಕಣ್ಣನಷ್ಟೇ ಅಲ್ಲ ,ಕೋಟಿ ಕೋಟಿ ಅಭಿಮಾನಿಗಳ) ತೇವ ಮಾಡುತ್ತವೆ..

'ಅವರ ನೆನಪು ಮತ್ತೆ ಮತ್ತೆ ಕಣ್ಣೀರು ತರುವಂತಿದ್ದರೂ ಅವರ ನೆನಪನ್ನು ಕಳೆದುಕೊಳ್ಳಲು ಇಚ್ಚಿಸದ ನಾನು ಆ ಕಣ್ಣೀರು ತರುವ ಆ ಕ್ಷಣಗಳನ್ನೇ ಮತ್ತೆ ಮತ್ತೆ ಬಯಸಲು ಇಷ್ಟಪಡುತ್ತೇನೆ..'
ಆ ನೆನಪಿಗೆ ನನ್ನ ಮತ್ತಷ್ಟು ಅಶ್ರುತರ್ಪಣ..

ಹೇಳಬೇಕೆಂದರೆ ಸಿ. ಅಶ್ವಥ್ ಅವರ ಬಗ್ಗೆ ನನಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ.. ಆದರೆ ಇತ್ತೀಚಿಗೆ ಅವರ ಬಗ್ಗೆ ತುಂಬಾ ಆಸಕ್ತಿ ಹೆಚ್ಚುತ್ತಿದೆ..
ಅದು ಎಂತದ್ದೆ ಸಾಹಿತ್ಯವಾದರೂ ಕೆಲವು ಗಾಯಕರ ದನಿ ಸೋಕಿದೊಡನೆ ಆ ಹಾಡಿಗೆ ಜೀವ ಬರುವುದುಂಟು.. ಅಂತಹ ಗಾಯಕರಲ್ಲಿ ಒಬ್ಬರು ಸಿ.ಅಶ್ವಥ್..
ಅವರ ಧ್ವನಿ ಯಾವ ಹಾಡಿನಲ್ಲಿದ್ದರೂ ಗುರುತಿಸುವಂತಹದ್ದು.. ಇತ್ತೀಚೆಗಂತೂ ಅವರ ಹಾಡುಗಳು ನನ್ನ ಮನಸ್ಸಿಗೆ ಹೆಚ್ಚೇ ಇಷ್ಟವಾಗುತ್ತಿವೆ..
ಅವರ ದನಿಯಿಲ್ಲದೆ ೨೦೧೦ ರ ಕನ್ನಡ ರಾಜ್ಯೋತ್ಸವ ಕಳೆಗುಂದಿತ್ತೇನೋ..?

ಇತ್ತೀಚಿಗೆ ತುಂಬಾ ಕಾಡುತ್ತಿರುವ ಅವರ ಮಾಧುರ್ಯಗಾನದ ಒಂದು ಹಾಡಿನ ಸಾಲುಗಳನ್ನು ಇಂದು ಇಲ್ಲಿ ಹಾಕಲು ಇಷ್ಟಪಡುತ್ತೇನೆ..

ನನ್ನ ಬಾಳಿನ ಇರುಳ
ತಿಳಿಯಾಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ಬೆಳಗಲೇಬೇಕು..

ಕವಿದಿರುವ ಮೋಡಗಳ
ಸೀಳಿಹಾಕಲು ಅವಳ
ಕವಿದಿರುವ ಮೋಡಗಳ
ಸೀಳಿಹಾಕಲು ಅವಳ
ಕಣ್ಣ ಸುಳಿಮಿಂಚುಗಳು
ಹೊಳೆಯಲೇಬೇಕು..

ಹೊಳೆಯಲೇಬೇಕು..
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ಒಣಗಿದಾ ಎದೆಯನೆಲ
ನೆನೆಯಲು ನನ್ನವಳ
ಆನಂದ ಬಾಷ್ಪಗಳ
ಮಳೆಯಾಗಬೇಕು..
ಒಣಗಿದಾ... ಎದೆಯನೆಲ
ನೆನೆಯಲೂ.. ನನ್ನವಳ
ಆನಂದ ಬಾಷ್ಪಗಳ
ಮಳೆಯಾ...ಗಬೇಕು..
ಮಳೆಯಾಗಬೇಕೂ..

ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ನನ್ನ ಬಾನಿನ ನೀಲಿ
ಆ............................................ಅ
ಆಆಆ ಆಆಆ ಆಆಆಆಅ
ನನ್ನ ಬಾ...ನಿನ ನೀಲಿ...
ನನ್ನವಳ ಕಣ್ಣಾಲಿ
ಚಂದ್ರಿಕೆಯ ಸುಧೆಯಲ್ಲಿ
ತೋಯಲೇಬೇಕು..
ತೋಯಲೇ..ಬೇಕೂ..

ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..
ಬೆಳಗಲೇಬೇಕು..
ಬೆಳಗಲೆಬೇಕೂ..
ಬೆಳಗಲೇಬೇಕೂ..


_,_,_,_,_,_

ಮತ್ತೆ ಜೊತೆಗೆ ಇನ್ನೊಂದು ವಿಷಯ...
ನೆನ್ನೆ ಮೊನ್ನೆಯಷ್ಟೇ ಕಳೆದ ಈ ಡಿಸೆಂಬರ್ ೨೪ ನನಗೆ ಒಂದು ವಿಶೇಷವಾದ ದಿನ.. ಕಾರಣ ನನ್ನ ಜೀವನದ ಏಕೈಕ ಆಪ್ತರೊಬ್ಬರ ಜನ್ಮದಿನ.. ಅವರೇ ಈ 'ಮನಸಿನಮನೆ' ಕಟ್ಟಲು ಕಾರಣರಾದ ಗುರು..

ಅಂದೇ ಈ ಲೇಖನ ಹಾಕಬೇಕೆಂದಿದ್ದೆ.. ತಪ್ಪು ಮಾಡಿದೆ.. ಕ್ಷಮೆಯಿರಲಿ..
ಆದರೂ ನನಗೊಂದು ಅಳುಕಿದೆ..
ಕಳೆದ ನವೆಂಬರ್ ೨ ನನ್ನ ಗೆಳತಿಯೊಬ್ಬಳ ಜನ್ಮದಿನ.. ಅಂದು ನಾನು ತುಂಬಾ ಕ್ರಿಯಾಶೀಲತೆಯಿಂದ ಓಡಾಡಿಕೊಂಡು ಅವಳಿಗೆ ಕೊಡುಗೆ ಇತ್ತು ತಕ್ಕಮಟ್ಟಿಗೆ ಸಂಭ್ರಮ ಆಚರಿಸಿದೆ..
ಹಲವಾರು ಸಲ ಜಗಳ,ಮುನಿಸುಗಳೊಂದಿಗೆ ಇರುವ ನನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಬಹಳ ತಲೆ ಕೆಡಿಸಿಕೊಂಡಿದ್ದ ನಾನು ಇವರ ಜನ್ಮದಿನದ ಬಗ್ಗೆ ಏಕೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ ಕೇವಲ ತಡವಾದ ಶುಭಾಷಯ ಮಾತ್ರ ಹೇಳಿ ಅವರ ಜನ್ಮದಿನ ಮುಗಿಸಿದ್ದೇಕೆ ...?
ಹೇಳಬೇಕೆಂದರೆ ಆಕೆಗಿಂತ ಇವರೇ ನನಗೆ ಮುಖ್ಯವಾದವರು..(ಇದನ್ನು ಓದಿದ ಆಕೆ ಬೇಸರಾಗದಿರಲಿ..)
ಅವಳಿಗಾಗಿಯೇ ಅಂದೊಂದು ಕವಿತೆ ಕೂಡ ಬರೆದಿದ್ದೆ..
ಇವರಿಗೆ ಬರೆಯಬೇಕೆನ್ದುಕೊಂದಿದ್ದರೂ ಕೊನೆಯಲ್ಲಿ ಕೈಬಿಟ್ಟೆ..
ತಪ್ಪಾಗಿದೆ ಮತ್ತೊಮ್ಮೆ ಕ್ಷಮೆಯಾಚನೆ ಮಾಡುತ್ತೇನೆ..

~.~

27 ಕಾಮೆಂಟ್‌ಗಳು:

ಭಾಶೇ ಹೇಳಿದರು...

ಕಳೆದ ವರ್ಷದ ಮೆಲುಕು ನೋವನ್ನೇ ನೀಡುತ್ತವೆ! ಬರುವ ಈ 2011 ಚೆನ್ನಾಗಿರಲಿ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

sunaath ಹೇಳಿದರು...

ಹೊಸ ವರ್ಷವು ನಿಮಗೆ ಹಾಗು ಎಲ್ಲರಿಗೂ ಶುಭದಾಯಕವಾಗಲಿ.

ಮನದಾಳದಿಂದ............ ಹೇಳಿದರು...

ಹೊಸವರುಷ ಹಳೆಯ ಕಹಿ ನೆನಪುಗಳನ್ನೆಲ್ಲಾ ಮರೆಸಿ ಹೊಸ ಬೆಳಕನ್ನು ತರಲಿ.......
ನಿಮಗೂ ಹೊಸ ವರ್ಷದ ಶುಭಾಶಯಗಳು........

PAVI.M.GOWDA ಹೇಳಿದರು...

WISH HAPPY NEW YEAR 2011

NIMMA JIVANAU SANTHOSADINDA ERALI

ALLARIGU 2011 SANTHOSADAYAKAVAGIRALI

ಸುಧೇಶ್ ಶೆಟ್ಟಿ ಹೇಳಿದರು...

2011 nimage kushi tharali :)

Chandru ಹೇಳಿದರು...

meluku haaki munde saaguva hosa nireeksheyali

V.R.BHAT ಹೇಳಿದರು...

ಹೊಸ ಕ್ಯಾಲೆಂಡರ್ ವರ್ಷದ ಹಾರ್ದಿಕ ಶುಭಾಶಯಗಳು, ಮೆಲುಕಿದ್ದೀರಿ, ಇನ್ನು ಮುನ್ನಡೆಯುವುದೊಂದೇ ಬಾಕಿ!

KalavathiMadhusudan ಹೇಳಿದರು...

ಮನಸಿನ ಮನೆಯವರೇ ಚಿತ್ರರಂಗಕ್ಕೂ ,ಸುಗಮ ಸಂಗೀತ ಕ್ಷೇತ್ರಕ್ಕೂ ತುಂಬಲಾರದ ನಷ್ಟವೇ ಸರಿ.ನಿಮ್ಮ ಲೇಖನ ಅರ್ಥ ಪೂರ್ಣವಾಗಿದೆ.ನಿಮಗೆ ಹೊಸ ವರುಷದ ಶುಭಹಾರೈಕೆಗಳು

shridhar ಹೇಳಿದರು...

ಕತ್ತಲೆ ಮನೆ .. ಮನಸಿನ ಮನೆಯಾಗಿರಿವುದು ಆಶಾದಾಯಕ ವಿಷಯ ..

ಅಗಲಿದ ಚೇತನಗಳಿಗೆ ಲೇಖನದ ಮೂಲಕ ನಮನಗಳನ್ನು ಸಲ್ಲಿಸಿದ್ದೀರಿ ..
ನಿಮ್ಮೊಂದಿಗೆ ನಾವು ಧ್ವನಿಗೂಡಿಸುತ್ತೇವೆ.

shivu.k ಹೇಳಿದರು...

ಕಳೆದ ವರ್ಷದ ಅವಲೋಕನ ಚೆನ್ನಾಗಿದೆ. ಅಂದಹಾಗೆ ಡಿಸೆಂಬರ್ ೨೪ ನನ್ನ ಜನ್ಮ ದಿನವೂ ಕೂಡ..

ಚುಕ್ಕಿಚಿತ್ತಾರ ಹೇಳಿದರು...

ಹೊಸ ವರುಷಕ್ಕೆ ಕತ್ತಲೆ ಮನೆಯಲ್ಲಿ ಬೆಳಕು ಮೂಡಲಿ. ಅದನ್ನು ಬೆಳಕಿನ ಮನೆಯಾಗಿಸಿ.ಧನಾತ್ಮಕ ಚಿ೦ತನೆ ನಡೆಯಲಿ.
ಹೊಸ ವರುಷದ ಹಾರ್ಧಿಕ ಶುಭಾಶಯಗಳು.

ಸೀತಾರಾಮ. ಕೆ. / SITARAM.K ಹೇಳಿದರು...

jai ho! shubhavaagali

ಮನಸಿನಮನೆಯವನು ಹೇಳಿದರು...

ಭಾಶೇ,

ಹೌದೌದು..
ನನ್ನ ಮಾತು ಕೂಡ ಅದೆ..
ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

sunaath,
ನಿಮಗೂ ಶುಭಾಶಯಗಳು..ಎಲ್ಲರಿಗೂ ಶುಭವಾಗಲಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಮನದಾಳದಿಂದ............ ,

ಶುಭಾಶಯಗಳು.
ಎಲ್ಲರಿಗೂ ಹೊಸಬೆಳಕು ಮೂಡಲಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

pavithra,

ಶುಭಾಶಯಗಳು.
ನನ್ನ 'ಮನಸಿನಮನೆ'ಗೆ ಸ್ವಾಗತ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..

ಮನಸಿನಮನೆಯವನು ಹೇಳಿದರು...

ಸುಧೇಶ್ ಶೆಟ್ಟಿ ,

ಶುಭಾಶಯಗಳು. ಎಲ್ಲರಿಗೂ ಖುಷಿ ತರಲಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

Chandru,
ಶುಭಾಶಯಗಳು.
ನನ್ನ 'ಮನಸಿನಮನೆ'ಗೆ ಸ್ವಾಗತ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..

ಮನಸಿನಮನೆಯವನು ಹೇಳಿದರು...

ವಸಂತ್ ,

ಶುಭಾಶಯಗಳು.. ನನ್ನ ಹಾರೈಕೆ ಕೂಡ ಅದೆ..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ವಿ.ಆರ್.ಭಟ್,

ಶುಭಾಶಯಗಳು..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಕಲರವ ,

ಶುಭಾಶಯಗಳು..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

shridhar,

ಶುಭಾಶಯಗಳು.. ಎಲ್ಲರೂ ಕೈಗೂಡಿಸೋಣ..
ನನ್ನ 'ಮನಸಿನಮನೆ'ಗೆ ಸ್ವಾಗತ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ..

ಮನಸಿನಮನೆಯವನು ಹೇಳಿದರು...

shivu.k,

ಹೌದೆ.. ನಿಮಗೂ ತಡವಾದ ಶುಭಾಶಯಗಳು..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಚುಕ್ಕಿಚಿತ್ತಾರ ,

ಶುಭಾಶಯಗಳು..
ನಿಮ್ಮ ಹಾರೈಕೆಯಂತೆ ಆಗಲಿ..
ಪ್ರತಿಕ್ರಿಯೆಗೆ ಧನ್ಯವಾದಗಳು..

ಮನಸಿನಮನೆಯವನು ಹೇಳಿದರು...

ಸೀತಾರಾಮ. ಕೆ. / SITARAM.K .,


ಶುಭಾಶಯಗಳು..
ಪ್ರತಿಕ್ರಿಯೆಗೆ ಧನ್ಯವಾದಗಳು..

Unknown ಹೇಳಿದರು...

Neevu,Ashwath avara hadannu ,avara nenapannu hagu vishnuvardhan,Ashwath nenapisiddakke danyavadhagalu.

ಮನಸಿನಮನೆಯವನು ಹೇಳಿದರು...

ಸಹನಾ..,
ನನ್ನ ಮನಸಿನಮನೆಗೆ ಸ್ವಾಗತ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..
ಹೀಗೆಯೇ ಬರುತ್ತಿರಿ...

Related Posts Plugin for WordPress, Blogger...