
~.ಇಂದು ನನ್ನ 'ಮನಸಿನಮನೆ'ಗೆ ಒಂದು ವರ್ಷ ತುಂಬಿದ ಸಂಭ್ರಮ..
ಮೊದಲನೆಯದಾಗಿ ಈ ಶುಭಸಂದರ್ಭದಲ್ಲಿ ನನ್ನ ಬ್ಲಾಗಿನ ಪಯಣಕ್ಕೆ ಕಾರಣಕರ್ತರಾದ'ಜ್ಞಾನಮೂರ್ತಿ.ಟಿ.' ಎಂಬ ಓರ್ವ ಭಾವಜೀವಿಗೆ ಮನತುಂಬಿ ನನ್ನ ಹೂನಮನಗಳನ್ನುಅರ್ಪಿಸುತ್ತೇನೆ..
ಅವರ ಮಾರ್ಗದರ್ಶನದಲ್ಲಿ ಮೊದಲಿಗೆ ನಾನು 'ಬಲಿಪಶು' ಎಂಬ ಒಂದು ಬ್ಲಾಗನ್ನು ರಚಿಸಿದ್ದೆ..
ಬ್ಲಾಗ್ ಪರಿಚಿತವಾಗಬೇಕೆಂಬ ಆಸೆ ಕೆಲವರಿಗಿರುವಂತೆ ನನಗೂ ಇತ್ತು..
ಸಮಯದ ಅಭಾವದಿಂದಲೂ,ಭಾವಬಂಧನದಲ್ಲಿ ಸಿಲುಕಿ ಕ್ರಿಯಾಶೀಲತೆ ಕಳೆದುಕೊಂಡಿದ್ದರಿಂದಲೂನನ್ನ 'ಬಲಿಪಶು' ಬ್ಲಾಗ್ ಸಾಗರದ ಅಭಿವೃದ್ಧಿ ಪಥದಲ್ಲಿ ಆಮೆನಡಿಗೆಯಲ್ಲಿಸಾಗುತ್ತಿತ್ತು..
ನನ್ನ 'ಬಲಿಪಶು'ವಿಗೆ ಮೊದಲಾಗಿ ಪರಿಚಿತವಾದ ಬ್ಲಾಗಿಗರು- ಶಿವಶಂಕರ ಯಳವತ್ತಿ..ಬ್ಲಾಗ್ ಕುರಿತಾಗಿ ಕೆಲವು ವಿಷಯಗಳನ್ನು ನನ್ನ ಅರಿವಿಗೆ ತಂದ ಅವರಿಗೆ ನನ್ನಧನ್ಯವಾದಗಳನ್ನು ಅರ್ಪಿಸುತ್ತೇನೆ..
ಆ ಸಮಯದಲ್ಲಿ ನನ್ನ ಜೀವನದಲ್ಲಿ ಬಿರುಗಾಳಿಯೆದ್ದು ಮೈಮನಗಳ ಸುಳಿಯಲ್ಲಿ ಸಿಲುಕಿ ಹಲವುತಿರುವಿನ ದಾರಿಗಳಲ್ಲಿ ನಾನು ಸೋಲುಂಡ ಕಾರಣ ನಾನು ಬ್ಲಾಗ್ ಕಡೆ ಗಮನ ಹರಿಸಲಿಲ್ಲ..[ಆಸ್ತಿಕನಾದ ನಾನು ನನ್ನ ಆ ದು(ಪರಿ)ಸ್ಥಿತಿಗೆ ನನಗಿದ್ದ 'ರಾಹುದೆಸೆ'ಯೇ ಕಾರಣವೆಂದುಹೇಳುತ್ತೇನೆ..(ಜಾತಕ ಆಧಾರದ ಮೇಲೆ)]
ಅಲ್ಲಿಗೆ ನನ್ನ 'ಬಲಿಪಶು'ವಿನ ಪಯಣ ಸಂಪೂರ್ಣವಾಗಿ ನೆಲಕಚ್ಚಿತು..
ಕಾಲಕ್ರಮೇಣ ನನಗೆ ಬ್ಲಾಗ್ ಬಗೆಗಿದ್ದ ಆಸಕ್ತಿ ಕಡಿಮೆಯಾಗದೇ ಇದ್ದ ಕಾರಣ ದೀರ್ಘಬಿಡುವಿನ ನಂತರ ('ಗುರುದೆಸೆ' ಆರಂಭವಾದ ಮೇಲೆ..) ಬ್ಲಾಗ್ ಕುರಿತು ಹಲವಾರುಮಹದಾಸೆಗಳನ್ನು ಹೊತ್ತು 'ಮನಸಿನಮನೆ'ಯನ್ನು ಆರಂಭಿಸಿದೆ..
ಬ್ಲಾಗ್ ಚಿರಪರಿಚಿತವಾಗಿಸಬೇಕೆಂಬ ಆಸೆ ನನ್ನನ್ನು ದಿನೇ ದಿನೇ ಆವರಿಸುತ್ತಿತ್ತು..
ಕಾರಣಾಂತರಗಳಿಂದ ಕೇವಲ ಹುಣ್ಣಿಮೆ-ಅಮಾವಾಸ್ಯೆಗಳಲ್ಲಿ ಮಾತ್ರ ನನ್ನ 'ಮನಸಿನಮನೆ'ಯನ್ನುನವೀಕರಿಸುತ್ತಿದ್ದೆ..
"ಯಾವ ಬ್ಲಾಗಿಗರೂ ತಾವಾಗಿಯೇ ನಿನ್ನ ಬ್ಲಾಗನ್ನು ಹುಡುಕಿಕೊಂಡು ಬರುವುದಿಲ್ಲ.. ಅವರಬ್ಲಾಗುಗಳಿಗೆ ನೀನು ಪುನಃ-ಪುನಃ ಭೇಟಿ ಕೊಡುತ್ತ ನಿನ್ನ ಹೆಜ್ಜೆಗುರುತುಗಳನ್ನು ಅಲ್ಲಿಉಳಿಸಿ ಬರುತ್ತಿರಬೇಕು..
ಅವರ ಬ್ಲಾಗಿನ ಹಿಂಬಾಲಕರ ಪಟ್ಟಿಯಲ್ಲಿ ನೀನು ಸೇರಿಕೊಳ್ಳಬೇಕು..
ಹೀಗಾದಲ್ಲಿ ಮಾತ್ರ ಅವರಿಗೆ ನಿನ್ನ ಅಸ್ತಿತ್ವದ ಅರಿವಾಗಿ ಅವರು ನಿನ್ನ ಬ್ಲಾಗಿನಕಡೆಗೆ ಬರುತ್ತಾರೆ..
ಆಗ ಮಾತ್ರ ನಿನ್ನ ಬ್ಲಾಗು ಪರಿಚಿತವಾಗಲು ಸಾಧ್ಯ''ಎಂದು ಗುರುಗಳು ಕಿವಿಮಾತು ಹೇಳಿದರು..
ಅಂತೆಯೇ ನಾನು ನೂರಾರು ಬ್ಲಾಗುಗಳನ್ನು ಜಾಲಾಡಿ ಅಲ್ಲಿ ನನ್ನ ಹೆಜ್ಜೆಗುರುತನುಳಿಸಿಬರಲು ಶುರುಮಾಡಿದೆ..
ನನ್ನ ಜಾಲಾಟದಲ್ಲಿ ಕಂಡ ಬ್ಲಾಗುಗಳಲ್ಲಿ ನಾನು ವಿಧವಿಧದ ಬಣ್ಣದಕ್ಷರಗಳನ್ನು ಕಂಡಿದ್ದೇನೆ..:
*ಸಮಾಜದ ಸ್ಥಿತಿ-ಗತಿಯನ್ನು ವಿಮರ್ಶಿಸಿ ಬರೆಯುವ ಉತ್ತಮ ಸಕಾಲಿಕ ಲೇಖನಗಳು..
*ಎಲ್ಲೋ ಅಡಗಿದ್ದ ನಮ್ಮ ಕಣ್ಣಿಗೇ ಬೀಳದ ಹಲವು ಅಮೂಲ್ಯ ಪುರಾಣೇತಿಹಾಸಗಳ ವಿಷಯವನ್ನುನಮ್ಮ ಜ್ಞಾನದರಿವಿಗೆ ತರುವ ಉತ್ತಮ ಲೇಖನಗಳು..
*ಪ್ರೇಮ-ಪ್ರೀತಿ-ವಿರಸ-ಗೆಳತಿ-ಗೆಳೆಯ-ಸನಿಹ ಈ ವಸ್ತುಗಳ ಸುತ್ತಲೇ ಸುತ್ತುತ್ತ ಬರೆದ(ಭಗ್ನ)ಕವಿತೆ(ವ್ಯಥೆ)ಗಳು..
*ಅವರವರ ಕಥೆಯನ್ನೇ ಬರೆದ ಕಥಾನಕಗಳು..
*ಅವರು ಕೈಗೊಂಡಿದ್ದ ಪ್ರವಾಸದ ಕುರಿತು ಬರೆದು ಪ್ರವಾಸೀಯ ತಾಣಗಳ ಪರಿಚಯಿಸುವ ಕಥನಗಳು..
*ನಾಲ್ಕಾರು ಸಾಲಿನಲ್ಲಿ ನಗು ತುಂಬಿಸಿ ಬರೆದ ಹನಿಕವನಗಳು..
*ವಿಶೇಷ ರೀತಿಯ ಕಾದಂಬರಿಗಳು..
*ಪ್ರಕೃತಿ ವರ್ಣಿಸಿ ಬರೆದ ಸೌಂದರ್ಯ(ಕವಿ)ತೆಗಳು..
*ರುಚಿರುಚಿ ತಿಂಡಿ ತುಂಬಿದ ಅಡುಗೆಮನೆಯ ಪರಿಚಯಿಸುವ ಒಂದೆರಡೇ ವಿಶೇಷ ಅಭಿರುಚಿ ಲೇಖನಗಳು..
*ಕರುನಾಡಲ್ಲಿ ಕೊಲೆಯಾಗುತ್ತಿರುವ ಕನ್ನಡದ ಚಿತ್ರವಿಚಿತ್ರಗಳು..
*ಅಚ್ಚರಿ ತರಿಸುವ ವಿಸ್ಮಯಕಾರಿಗಳು..
*ರಸಿಕ ಮಹಾಮಣಿಗಳ ರಸಿ-ಕತೆಗಳು..
(ನನ್ನ ಬ್ಲಾಗು ಈ ಮೇಲಿನ ಯಾವುದಾದರೂ ಗುಂಪಿಗೆ ಸೇರುವುದೇ..)
ಕೊನೆಗೂ ನನ್ನ ಜಾಲಾಟದ ಶ್ರಮ ವ್ಯರ್ಥವಾಗದೆ ಗುರುಗಳು ಹೇಳಿದ್ದಂತೆ ಅನೇಕ ಬ್ಲಾಗಿಗರುನನ್ನ 'ಮನಸಿನಮನೆ'ಗೆ ಬರಲು ಶುರುವಾದರು..
ಹಲವಾರುಬ್ಲಾಗಿಗರ ನೆಂಟಸ್ತಿಕೆ ನನ್ನ 'ಮನಸಿನಮನೆ'ಗೆ ಇರುವುದು ನನಗೆ ಖುಷಿ ತಂದಿದೆ..(ಹೆಸರು ನಮೂದಿಸಿಲ್ಲ..)
ಈ ಬ್ಲಾಗ್ ಆರಂಭಿಸಿದ ಮೇಲೂ ಕೆಲವೊಮ್ಮೆ ಕಾರಣಗಳಲ್ಲದ ಕಾರಣ ನೀಡಿ ಬ್ಲಾಗ್ ನವೀಕರಿಸದೆಖಾಲಿ ಬಿಟ್ಟಿದ್ದಕ್ಕೆ ಕ್ಷಮೆ ಇರಲಿ..
ಕೆಲವು ಬ್ಲಾಗಿಗರ 'ಮನೆ'ಗೆ ಎಷ್ಟು ಸಲ ಭೇಟಿ ಕೊಡುತ್ತಲಿದ್ದರೂ ಅವರು ನನ್ನ ಬ್ಲಾಗಿನಕಡೆ ತಿರುಗಿಯೂ ನೋಡದೆ ಇರುವುದು ತುಸು ಬೇಸರದ ಸಂಗತಿಯಾಗಿದೆ.. ಅದಕ್ಕೆ ಕಾರಣತಿಳಿದುಬರುತ್ತಿಲ್ಲ..
ನನಗೆ ಅವರ ಬ್ಲಾಗ್ ಕಾಣದೆ ನಾನು ಅವರ ಬ್ಲಾಗಿಗೆ ಭೇಟಿ ಕೊಡದಿದ್ದರೂ ಸ್ವತಃ ನನ್ನಬ್ಲಾಗಿಗೆ ಬಂದು ಪ್ರೋತ್ಸಾಹ ನೀಡುತ್ತಿರುವ ಹಲವಾರು ಮಿತ್ರವರ್ಯರಿಗೆ ವಿಶೇಷವಾಗಿಧನ್ಯವಾದಗಳು..
ಬ್ಲಾಗಿನ ಬಗ್ಗೆ ನನಗೆ ಇನ್ನೂ ಸಂಪೂರ್ಣವಾಗಿ ತಿಳುವಳಿಕೆ ಇಲ್ಲ..
ಅದಕ್ಕಾಗಿ ಕೆಲ ಮಿತ್ರ ಬ್ಲಾಗಿಗರಿಂದ ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕೆಂಬ ಹಂಬಲದಿಂದ,ನನಗೆ ಕೀಳಿರಿಮೆ ಉಂಟಾಗಬಹುದು ಎಂಬ ಕೊಂಕಿದ್ದರೂ,ಅವರಿಗೆ ನನ್ನ ಸಂಪರ್ಕಕೊಂಡಿ ನೀಡಿಅವರ ಸಂಪರ್ಕಕ್ಕಾಗಿ ಹಾತೊರೆದೆ..
ಇದರಿಂದ ಏನೂ ಪ್ರಯೋಜನವಾಗದೆ ನಾನು ಸೋತು ಸುಣ್ಣವಾದೆ..
ಇದರ ಕುರಿತು ಸ್ವಲ್ಪ ಬೇಸರವಿದೆ..
ಇಷ್ಟು ಮಾತ್ರ ಹೊರತುಪಡಿಸಿ ಈ ಒಂದುವರ್ಷದ ನನ್ನ ಬ್ಲಾಗಿನ ಪಯಣ ಸಂತೋಷ ತಂದಿದೆ..
ಈಸಂತೋಷಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ನನ್ನ ಅನಂತಅನಂತ ಧನ್ಯವಾದಗಳು..
ನಾನು ಇನ್ನೂ ಬ್ಲಾಗ್ ಬಗ್ಗೆ ತಿಳಿದುಕೊಳ್ಳುವುದು ಬೇಕಾದಷ್ಟಿದೆ.. ತಿಳಿದುಕೊಳ್ಳಲುನಿಮ್ಮ ಸಹಕಾರ ಬೇಕಿದೆ..
ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರಿ ಎಂದು ಮತ್ತೊಮ್ಮೆ ಎಲ್ಲರಿಗೂ ಮನತುಂಬಿ ವಂದಿಸುತ್ತಾ....~
~.~