ತಿರುಗಿ ನೋಡಿದಾಗ...

[ ಹಲವು ನೆನಪುಗಳ ಬುತ್ತಿ..]


ಕಾಲವು ನಮ್ಮೆಲ್ಲರನ್ನೂ ೨೦೧೦ ರಿಂದ ತಂದು ೨೦೧೧ ರ ಹೊಸ್ತಿಲಲ್ಲಿ ತಂದು ನಿಲ್ಲಿಸಿದೆ..
ಈ ಸಮಯದಲ್ಲಿ ೨೦೧೦ರ ಕೆಲವು ನೆನಪುಗಳನ್ನು ಮೆಲುಕು ಹಾಕೋಣ ಎನಿಸುತ್ತಿದೆ..
೨೦೧೦ ರ ಆರಂಭ ಕನ್ನಡಿಗರ ಪಾಲಿಗೆ ಶುಭಾರಂಭ ಆಗಲಿಲ್ಲ..
ನಿಮಗೆ ತಿಳಿದಿರುವಂತೆಯೇ ಕಾರಣ ೨೦೦೯ರ ಕರಾಳ ಅಂತ್ಯ..

೨೦೦೯ರ ಅಂತ್ಯದಲ್ಲಿ ಕನ್ನಡ ಭಾವಗೀತಾ,ಜಾನಪದಗೀತ ಹಾಗೂ ಸುಗಮ ಸಂಗೀತ ಲೋಕದ ಕಂಚಿನ ಕಂಠದ ಖ್ಯಾತ ಗಾಯಕರಾದ ಸಿ.ಅಶ್ವತ್ಥ ನಾರಾಯಣ ಅವರು ಅವರ ೭೦ ನೆ ಜನ್ಮದಿನವಾದ ಡಿಸೆಂಬರ್ ೨೯ ರಂದೇ ನಮ್ಮನ್ನು ಅಗಲಿದ್ದರು.. ಇವರ ಅಗಲಿಕೆಯಿಂದ ಸುಗಮ ಸಂಗೀತ ಲೋಕದಲ್ಲಿ ಕಣ್ಣೀರು ಕೇಳುವ ಸಂಗೀತ ಮೊರೆಯತೊಡಗಿತು..

ನೋವಿನಿಂತ ಚೇತರಿಸಿಕೊಳ್ಳುವಷ್ಟರಲ್ಲೇ ಡಿಸೆಂಬರ್ ೩೦ ರಂದು ಕನ್ನಡ ಕಲಾದೇವಿಯ ಕಿರೀಟದಿಂದ ಇನ್ನೊಂದು ಮುತ್ತು ಉದುರಿಹೋಯಿತು.. ಆ ಮುತ್ತು ಕನ್ನಡ ಸಿನಿಮಾರಂಗದ ಫೀನಿಕ್ಸ್,ಕರ್ನಾಟಕ ಸುಪುತ್ರ, ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್.
ಅವರು ಸಾವನ್ನಪ್ಪಿ ಕನ್ನಡಾಭಿಮಾನಿಗಳಿಗೆ ಭಾರಿ ಆಘಾತ ಉಂಟಾಯ್ತು..
'ಅಪ್ಪಾಜಿ ಇಲ್ಲ ಹೊಸವರ್ಷದ ಸಂಭ್ರಮ ನಮಗೇಕೆ' ಎಂದು ಅಭಿಮಾನಿಗಳು ಕಣ್ಣೀರು ಹರಿಸಿದ್ದರು..

ಹೀಗೆ ೨೦೧೦ ಕೆಟ್ಟದಾಗಿ ಆರಂಭವಾಯ್ತು..
ಆರಂಭದಲ್ಲೇ ಸುಮಾರು ೩೭೦ ಚಲಚಿತ್ರಗಳಲ್ಲಿ ನಟಿಸಿದ್ದ ಕನ್ನಡ ಚಿತ್ರರಂಗದ ಮತ್ತೊಬ್ಬ ಕಲಾವಿದ ಕೆ.ಎಸ್. ಅಶ್ವಥ್ ಅವರು ಕಾಲವಾಗಿ ಹೋದರು..

ವಿಷ್ಣು ಅವರಿಲ್ಲದೆ ಅವರ ಜನ್ಮದಿನವಾದ ಸೆಪ್ಟೆಂಬರ್ ೧೮ ಅಭಿಮಾನಿಗಳೆಲ್ಲ ಅನಾಥರಾಗಿ ಕಂಗಾಲಾಗಿ ಕುಳಿತಿದ್ದರು..
ಈಗಲೂ ಅವರ ಭಾವುಕ ನಟನೆಯ ದೃಶ್ಯಗಳು ನನ್ನ ಕಣ್ಣುಗಳನ್ನು(ನನ್ನ ಕಣ್ಣನಷ್ಟೇ ಅಲ್ಲ ,ಕೋಟಿ ಕೋಟಿ ಅಭಿಮಾನಿಗಳ) ತೇವ ಮಾಡುತ್ತವೆ..

'ಅವರ ನೆನಪು ಮತ್ತೆ ಮತ್ತೆ ಕಣ್ಣೀರು ತರುವಂತಿದ್ದರೂ ಅವರ ನೆನಪನ್ನು ಕಳೆದುಕೊಳ್ಳಲು ಇಚ್ಚಿಸದ ನಾನು ಆ ಕಣ್ಣೀರು ತರುವ ಆ ಕ್ಷಣಗಳನ್ನೇ ಮತ್ತೆ ಮತ್ತೆ ಬಯಸಲು ಇಷ್ಟಪಡುತ್ತೇನೆ..'
ಆ ನೆನಪಿಗೆ ನನ್ನ ಮತ್ತಷ್ಟು ಅಶ್ರುತರ್ಪಣ..

ಹೇಳಬೇಕೆಂದರೆ ಸಿ. ಅಶ್ವಥ್ ಅವರ ಬಗ್ಗೆ ನನಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ.. ಆದರೆ ಇತ್ತೀಚಿಗೆ ಅವರ ಬಗ್ಗೆ ತುಂಬಾ ಆಸಕ್ತಿ ಹೆಚ್ಚುತ್ತಿದೆ..
ಅದು ಎಂತದ್ದೆ ಸಾಹಿತ್ಯವಾದರೂ ಕೆಲವು ಗಾಯಕರ ದನಿ ಸೋಕಿದೊಡನೆ ಆ ಹಾಡಿಗೆ ಜೀವ ಬರುವುದುಂಟು.. ಅಂತಹ ಗಾಯಕರಲ್ಲಿ ಒಬ್ಬರು ಸಿ.ಅಶ್ವಥ್..
ಅವರ ಧ್ವನಿ ಯಾವ ಹಾಡಿನಲ್ಲಿದ್ದರೂ ಗುರುತಿಸುವಂತಹದ್ದು.. ಇತ್ತೀಚೆಗಂತೂ ಅವರ ಹಾಡುಗಳು ನನ್ನ ಮನಸ್ಸಿಗೆ ಹೆಚ್ಚೇ ಇಷ್ಟವಾಗುತ್ತಿವೆ..
ಅವರ ದನಿಯಿಲ್ಲದೆ ೨೦೧೦ ರ ಕನ್ನಡ ರಾಜ್ಯೋತ್ಸವ ಕಳೆಗುಂದಿತ್ತೇನೋ..?

ಇತ್ತೀಚಿಗೆ ತುಂಬಾ ಕಾಡುತ್ತಿರುವ ಅವರ ಮಾಧುರ್ಯಗಾನದ ಒಂದು ಹಾಡಿನ ಸಾಲುಗಳನ್ನು ಇಂದು ಇಲ್ಲಿ ಹಾಕಲು ಇಷ್ಟಪಡುತ್ತೇನೆ..

ನನ್ನ ಬಾಳಿನ ಇರುಳ
ತಿಳಿಯಾಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ಬೆಳಗಲೇಬೇಕು..

ಕವಿದಿರುವ ಮೋಡಗಳ
ಸೀಳಿಹಾಕಲು ಅವಳ
ಕವಿದಿರುವ ಮೋಡಗಳ
ಸೀಳಿಹಾಕಲು ಅವಳ
ಕಣ್ಣ ಸುಳಿಮಿಂಚುಗಳು
ಹೊಳೆಯಲೇಬೇಕು..

ಹೊಳೆಯಲೇಬೇಕು..
ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ಒಣಗಿದಾ ಎದೆಯನೆಲ
ನೆನೆಯಲು ನನ್ನವಳ
ಆನಂದ ಬಾಷ್ಪಗಳ
ಮಳೆಯಾಗಬೇಕು..
ಒಣಗಿದಾ... ಎದೆಯನೆಲ
ನೆನೆಯಲೂ.. ನನ್ನವಳ
ಆನಂದ ಬಾಷ್ಪಗಳ
ಮಳೆಯಾ...ಗಬೇಕು..
ಮಳೆಯಾಗಬೇಕೂ..

ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..

ನನ್ನ ಬಾನಿನ ನೀಲಿ
ಆ............................................ಅ
ಆಆಆ ಆಆಆ ಆಆಆಆಅ
ನನ್ನ ಬಾ...ನಿನ ನೀಲಿ...
ನನ್ನವಳ ಕಣ್ಣಾಲಿ
ಚಂದ್ರಿಕೆಯ ಸುಧೆಯಲ್ಲಿ
ತೋಯಲೇಬೇಕು..
ತೋಯಲೇ..ಬೇಕೂ..

ನನ್ನ ಬಾ..ಳಿನ ಇರುಳ
ತಿಳಿಯಾ..ಗಿಸಲು ಅವಳ
ಕೆಂಪುತುಟಿಗಳ ಹವಳ
ಬೆಳಗಲೇಬೇಕು..
ಬೆಳಗಲೇಬೇಕು..
ಬೆಳಗಲೆಬೇಕೂ..
ಬೆಳಗಲೇಬೇಕೂ..


_,_,_,_,_,_

ಮತ್ತೆ ಜೊತೆಗೆ ಇನ್ನೊಂದು ವಿಷಯ...
ನೆನ್ನೆ ಮೊನ್ನೆಯಷ್ಟೇ ಕಳೆದ ಈ ಡಿಸೆಂಬರ್ ೨೪ ನನಗೆ ಒಂದು ವಿಶೇಷವಾದ ದಿನ.. ಕಾರಣ ನನ್ನ ಜೀವನದ ಏಕೈಕ ಆಪ್ತರೊಬ್ಬರ ಜನ್ಮದಿನ.. ಅವರೇ ಈ 'ಮನಸಿನಮನೆ' ಕಟ್ಟಲು ಕಾರಣರಾದ ಗುರು..

ಅಂದೇ ಈ ಲೇಖನ ಹಾಕಬೇಕೆಂದಿದ್ದೆ.. ತಪ್ಪು ಮಾಡಿದೆ.. ಕ್ಷಮೆಯಿರಲಿ..
ಆದರೂ ನನಗೊಂದು ಅಳುಕಿದೆ..
ಕಳೆದ ನವೆಂಬರ್ ೨ ನನ್ನ ಗೆಳತಿಯೊಬ್ಬಳ ಜನ್ಮದಿನ.. ಅಂದು ನಾನು ತುಂಬಾ ಕ್ರಿಯಾಶೀಲತೆಯಿಂದ ಓಡಾಡಿಕೊಂಡು ಅವಳಿಗೆ ಕೊಡುಗೆ ಇತ್ತು ತಕ್ಕಮಟ್ಟಿಗೆ ಸಂಭ್ರಮ ಆಚರಿಸಿದೆ..
ಹಲವಾರು ಸಲ ಜಗಳ,ಮುನಿಸುಗಳೊಂದಿಗೆ ಇರುವ ನನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಬಹಳ ತಲೆ ಕೆಡಿಸಿಕೊಂಡಿದ್ದ ನಾನು ಇವರ ಜನ್ಮದಿನದ ಬಗ್ಗೆ ಏಕೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ ಕೇವಲ ತಡವಾದ ಶುಭಾಷಯ ಮಾತ್ರ ಹೇಳಿ ಅವರ ಜನ್ಮದಿನ ಮುಗಿಸಿದ್ದೇಕೆ ...?
ಹೇಳಬೇಕೆಂದರೆ ಆಕೆಗಿಂತ ಇವರೇ ನನಗೆ ಮುಖ್ಯವಾದವರು..(ಇದನ್ನು ಓದಿದ ಆಕೆ ಬೇಸರಾಗದಿರಲಿ..)
ಅವಳಿಗಾಗಿಯೇ ಅಂದೊಂದು ಕವಿತೆ ಕೂಡ ಬರೆದಿದ್ದೆ..
ಇವರಿಗೆ ಬರೆಯಬೇಕೆನ್ದುಕೊಂದಿದ್ದರೂ ಕೊನೆಯಲ್ಲಿ ಕೈಬಿಟ್ಟೆ..
ತಪ್ಪಾಗಿದೆ ಮತ್ತೊಮ್ಮೆ ಕ್ಷಮೆಯಾಚನೆ ಮಾಡುತ್ತೇನೆ..

~.~

Related Posts Plugin for WordPress, Blogger...