
ನೂರೆಂಟು ನೋವ ಅಂಧಕಾರದೊಳಗೆ
ನೋವ ಮರೆಸಿ ಮಾತೊಂದು ಮೊಳಗುತಿರಲು
ದಿವ್ಯದೀವಿಗೆಯು ಆರಿಹೋಗಿರಲು
ಜ್ಞಾನದೀವಿಗೆಯು ಬೆಳಗುತಿರಲು
ಕತ್ತಲ ನುಂಗಿ ಬೆಳೆಯುತಿರಲು
ಮೂಕಮನಸು ಹೂಂಕರಿಸುತಿದೆ
ಗುರಿಯತ್ತ ನೆಟ್ಟಿರುವ ನೋಟದೊಳಗೆ
ನಿದಿರೆಯ ಮಂಪರು ಕಣ್ಣು ಕುಕ್ಕುತಿರಲು
ಕನಸಿಗೆ ಗಾಂಪರು ಬುದ್ಧಿ ಹೇಳಿರಲು
ಮುಗಿದ ಕೈಗಳು ಮುಗಿಯುತಲೇ ಇರಲು
ಬಾಯಿ ಮಂತ್ರವ ಜಪಿಸುತಲೇ ಇರಲು
ಮನಸು ಬೆತ್ತಲೆಯಾಗಿ ಓಡುತಿದೆ..
ಕತ್ತಲ ಮನಸಿನಮನೆಯೊಳಗೆ
ಗೆಲುವೆಂಬುದು ನೆರಳಾಗಿರಲು
ಕುರುಡುಮನ ಬೆಳಕಿಗೆ ಬಾರದಿರಲು
ನೆರಳಂತಿರುವ ಗೆಲುವ ಕಾಣದಿರಲು
ಗಗನತಾರೆಯ ಕೀಳಲೆತ್ನಿಸುತ್ತಿರಲು
ಕಾಣದ ಕೈ ಶೋಧಿಸುತ್ತಲೇ ಇದೆ..
ದಿವ್ಯದೀವಿಗೆಯು ಕತ್ತಲ ನೆಟ್ಟಿದೆ
ಜ್ಞಾನದೀವಿಗೆಯು ಬೆಳಕ ನೆಟ್ಟಿದೆ
..-..-..-..-..-..-..-..-..-..-..-..-..-..-..-..-..-..-..-..-..-..-..
ಆರ್ಕುಟ್ : http://www.orkut.co.in/Main#Profile?rl=fpp&uid=4606487278641111312,
ಆರ್ಕುಟ್ : http://www.orkut.co.in/Main#Profile?rl=fpp&uid=4606487278641111312,
~.~